‘ಖುಷಿಯಾಗಾಕ ಏನು ಉಳಿದೈತಲೇ... ಅಕ್ಕಿ, ಬ್ಯಾಳಿ, ತರಕಾರಿ, ಗ್ಯಾಸು, ಪೆಟ್ರೋಲು ಎಲ್ಲಾನೂ ತುಟ್ಟಿಯಾಗೈತಿ. ಜೀವನಾ ವಜ್ಜೆಯಾಗೇದ, ಕೊರೊನಾ ಇನ್ನಾ ಪೂರಾ ಹೋಗಿಲ್ಲ. ಮಕಾಡೆ ಮಲಗಿದ್ದ ವ್ಯಾಪಾರ ವಹಿವಾಟು ಈಗೊಂಚೂರು ಎದ್ದೈತಿ ಅಷ್ಟೆ, ಎಲ್ಲಾ ಸರಿಯಾಗಾಕ ಇನ್ನಾ ಎಷ್ಟು ವರ್ಷ ಆಗತೈತಿ ಗೊತ್ತಿಲ್ಲ. ನಿಮ್ಮ ಆನಂದಮಾಮಾ ಬ್ಯಾರೆ ಕುರ್ಚಿ ಕೊಡೂತನಕ ದಗದ ಮಾಡಲ್ಲಂತ ಮೂತಿ ಉಬ್ಬಿಸ್ಯಾನ. ನಾ ಹೈಕಮಾಂಡ್ ಆಜ್ಞೆ ಕೇಳಲಾ ಅಥವಾ ಕುರ್ಚಿಕ್ಯಾತೆಗಾರರ ಪ್ರಲಾಪ ಕೇಳಲಾ ಅಂತ ಬೊಮ್ಮಾಯಿ ಅಂಕಲ್ಲಿಗೆ ಚಿಂತೆಯಾಗೈತಿ. ಯಾರಿಗಿ ಖುಷಿ ಐತಿ’ ಎಂದೆ.