ನಾನು ಆವತ್ತು ತುರೇಮಣೆ ಮನೆ ಹತ್ತಿರ ಹೋದಾಗ ಹೆಗಲಿಗೆ ಚೀಲ ಹಾಕಿ ಹೊರಟಿದ್ದರು. ತರಕಾರಿ ಅಂಗಡಿ ಕೆಂಪಣ್ಣ ‘ಏನ್ ತುರೇಮಣೆಸಾ ಈಕಡೀಕೆ ಬರದೇ ಬುಟ್ಬುಟ್ರಿ?’ ಅಂದ. ಯಾವ ತರಕಾರೀನೂ 60ಕ್ಕೆ ಕಡಮೆ ಇರಲಿಲ್ಲ. ‘ನಮಿಗೇ ಗೀಟಕಿಲ್ಲಾ ಕಣ್ಸಾ. ಕೇಜಿಗೆ ಐವತ್ತು ಪೈಸ ಲಾಭ ಅಷ್ಟೇಯಾ’ ಅಂದ. ಇನ್ನು ಎಣ್ಣೆ ಬೆಲೆ ಮುಗಿಲು ಮುಟ್ಟಿತ್ತು. ‘ಇದೇನ್ಲಾ ಹೊಟ್ಟೆಗಾಕ ಎಣ್ಣೆ, ಅಡುಗೆ ಎಣ್ಣೆ, ಗಾಡಿಗಾಕ ಎಣ್ಣೆ ಎಲ್ಲಾದರ ರೇಟು ನೂರರ ತಾವೇ ಅವಲ್ಲೋ!’ ಅಂದ್ರು.