<p>ಪೇಪರು ಹಿಡಿದಿದ್ದ ಬೆಕ್ಕಣ್ಣ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಜೋರಾಗಿ ಓದಿತು.</p>.<p>‘ಗುಡ್ಬಾಯ್… ಬೆಳ್ಬೆಳಗ್ಗೆ ಹಿಂಗೆ ಬುದ್ಧನ ಸುಭಾಷಿತ ನೆನಪಿಸಿಕೋಬೇಕು’ ಎಂದೆ.</p>.<p>‘ಪೂರಾ ಕೇಳು, ಆಸೆಯೇ ದುಃಖಕ್ಕೆ ಮೂಲ, ಗ್ಯಾರಂಟಿಯೇ ಬೆಲೆಯೇರಿಕೆಗೆ ಮೂಲ ಅಂತ ನಮ್ ಕುಮಾರಣ್ಣ ಹೇಳ್ಯಾನೆ. ಸಿದ್ದು ಅಂಕಲ್ಲು ಪೆಟ್ರೋಲು, ಡೀಸೆಲ್ ಬೆಲೆ ಕಂಡ್ರಾಪಟ್ಟಿ ಏರಿಸಿದ್ದು ಅದಕ್ಕೇ’ ಎಂದಿತು.</p>.<p>‘ನಿಮ್ ಮೋದಿಮಾಮನೂ ಚುನಾವಣೆ ಪ್ರಣಾಳಿಕೆವಳಗೆ ಮೋದಿ ಕೀ ಗ್ಯಾರಂಟಿ ಅಂತ ವಾಗ್ದಾನ ಮಾಡಿದ್ದರಲ್ಲ… ಮತ್ತೆ ಮೋದಿ<br>ಮಾಮನ ಗ್ಯಾರಂಟೀನೂ ಜಾರಿಯಾದರೆ ಬೆಲೆಯೇರಿಕೆ ಇನ್ನಾ ನಾಕು ಪಟ್ಟು ಆಗಬೌದು’ ಎಂದೆ.</p>.<p>‘ಮೋದಿಮಾಮನ ಗ್ಯಾರಂಟಿ ಕೇಂದ್ರದ್ದು, ಅದ್ರಿಂದ ಬೆಲೆಯೇರಿಕೆ ಆಗಂಗಿಲ್ಲೇಳು. ಈ ಕಾಂಗಿಗಳು ಸುಮ್ ಸುಮ್ಮನೆ ಕಂಡೋರಿಗೆಲ್ಲ ಕೈಯೆತ್ತಿ ಗ್ಯಾರಂಟಿ ಕೊಡಬಾರದು. ಹಿಂದುಮುಂದಿಲ್ಲದೇ ಗ್ಯಾರಂಟಿ ಕೊಟ್ಟು, ಇಡೀ ರಾಜ್ಯನೇ ಹಾಳು ಮಾಡ್ಯಾರೆ’ ಎಂದು ವಟಗುಟ್ಟಿತು.</p>.<p>‘ಗ್ಯಾರಂಟಿಗಳಿಗೆ ರೊಕ್ಕ ಹೊಂದಿಸಾದು ಹೆಂಗ ಅಂತ ಸಲಹೆ ಕೊಡಕ್ಕೆ ಸರ್ಕಾರದವ್ರು ಬೋಸ್ಟನ್ ಕನ್ಸಲ್ಟನ್ಸಿ ನೇಮಕ ಮಾಡಿಕೊಂಡಾರಂತೆ, ಚಿಂತಿ ಮಾಡಬ್ಯಾಡ’ ಎಂದು ಸಮಾಧಾನಿಸಿದೆ.</p>.<p>‘ನಮ್ಮ ರಾಜ್ಯದಾಗೆ ಆರ್ಥಿಕ ಸಲಹೆ ಕೊಡೋರೇನು ಕಡಿಮಿ ಬಿದ್ದಾರೇನು’ ಎಂದ ಬೆಕ್ಕಣ್ಣ, ‘ಹೋಗ್ಲಿಬಿಡು, ನೋಡಿಲ್ಲಿ, ಯೆಡ್ಯೂರಜ್ಜಾರ ಜೋಡಿ ನಮ್ ಕುಮಾರಣ್ಣ ಎಷ್ಟ್ ಚಂದ ಕುಂತಾನೆ’ ಎಂದು ನೂತನ ಸಂಸದರ ಸನ್ಮಾನ ಸಮಾರಂಭದ ಫೋಟೊ ತೋರಿಸಿತು.</p>.<p>‘ಕುಮಾರಣ್ಣ ಹೆಗಲ ಮ್ಯಾಲೆ ತೆನೆಚಿತ್ರದ ಟವೆಲ್ ಬದಲು ಕಮಲದ ಹೂವಿನ ಶಾಲು ಹಾಕ್ಕೊಂಡಾನಲ್ಲ’ ಎಂದೆ. ‘ಬದಲಾವಣೆಯೇ ಜಗದ ನಿಯಮ!’ ಎಂದು ಉದ್ಗರಿಸಿತು ಬೆಕ್ಕಣ್ಣ.</p>.<p>‘ರಾಗಿತೆನೆ-ಕಮಲದಳದ ಸಖ್ಯ ಈಥರಾ <br />ಫೆವಿಕಾಲಿನ್ಹಂಗಿದ್ದರೆ, ಸರ್ಕಾರ ರಚಿಸಬೌದು ಅಂದಾನೆ ನಿಮ್ಮ ಕುಮಾರಣ್ಣ. ಎಷ್ಟು ಲಗೂನೆ ಹಿಂದಿನ ಜಗಳ, ದ್ವೇಷ ಎಲ್ಲಾ ಮರೆತುಬಿಟ್ಟಾರೆ!’</p>.<p>‘ಹೌದು ಮತ್ತೆ… ಕುರ್ಚಿಯಾಸೆಯೇ ಮೈತ್ರಿಗೆ ಮೂಲ’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪೇಪರು ಹಿಡಿದಿದ್ದ ಬೆಕ್ಕಣ್ಣ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಜೋರಾಗಿ ಓದಿತು.</p>.<p>‘ಗುಡ್ಬಾಯ್… ಬೆಳ್ಬೆಳಗ್ಗೆ ಹಿಂಗೆ ಬುದ್ಧನ ಸುಭಾಷಿತ ನೆನಪಿಸಿಕೋಬೇಕು’ ಎಂದೆ.</p>.<p>‘ಪೂರಾ ಕೇಳು, ಆಸೆಯೇ ದುಃಖಕ್ಕೆ ಮೂಲ, ಗ್ಯಾರಂಟಿಯೇ ಬೆಲೆಯೇರಿಕೆಗೆ ಮೂಲ ಅಂತ ನಮ್ ಕುಮಾರಣ್ಣ ಹೇಳ್ಯಾನೆ. ಸಿದ್ದು ಅಂಕಲ್ಲು ಪೆಟ್ರೋಲು, ಡೀಸೆಲ್ ಬೆಲೆ ಕಂಡ್ರಾಪಟ್ಟಿ ಏರಿಸಿದ್ದು ಅದಕ್ಕೇ’ ಎಂದಿತು.</p>.<p>‘ನಿಮ್ ಮೋದಿಮಾಮನೂ ಚುನಾವಣೆ ಪ್ರಣಾಳಿಕೆವಳಗೆ ಮೋದಿ ಕೀ ಗ್ಯಾರಂಟಿ ಅಂತ ವಾಗ್ದಾನ ಮಾಡಿದ್ದರಲ್ಲ… ಮತ್ತೆ ಮೋದಿ<br>ಮಾಮನ ಗ್ಯಾರಂಟೀನೂ ಜಾರಿಯಾದರೆ ಬೆಲೆಯೇರಿಕೆ ಇನ್ನಾ ನಾಕು ಪಟ್ಟು ಆಗಬೌದು’ ಎಂದೆ.</p>.<p>‘ಮೋದಿಮಾಮನ ಗ್ಯಾರಂಟಿ ಕೇಂದ್ರದ್ದು, ಅದ್ರಿಂದ ಬೆಲೆಯೇರಿಕೆ ಆಗಂಗಿಲ್ಲೇಳು. ಈ ಕಾಂಗಿಗಳು ಸುಮ್ ಸುಮ್ಮನೆ ಕಂಡೋರಿಗೆಲ್ಲ ಕೈಯೆತ್ತಿ ಗ್ಯಾರಂಟಿ ಕೊಡಬಾರದು. ಹಿಂದುಮುಂದಿಲ್ಲದೇ ಗ್ಯಾರಂಟಿ ಕೊಟ್ಟು, ಇಡೀ ರಾಜ್ಯನೇ ಹಾಳು ಮಾಡ್ಯಾರೆ’ ಎಂದು ವಟಗುಟ್ಟಿತು.</p>.<p>‘ಗ್ಯಾರಂಟಿಗಳಿಗೆ ರೊಕ್ಕ ಹೊಂದಿಸಾದು ಹೆಂಗ ಅಂತ ಸಲಹೆ ಕೊಡಕ್ಕೆ ಸರ್ಕಾರದವ್ರು ಬೋಸ್ಟನ್ ಕನ್ಸಲ್ಟನ್ಸಿ ನೇಮಕ ಮಾಡಿಕೊಂಡಾರಂತೆ, ಚಿಂತಿ ಮಾಡಬ್ಯಾಡ’ ಎಂದು ಸಮಾಧಾನಿಸಿದೆ.</p>.<p>‘ನಮ್ಮ ರಾಜ್ಯದಾಗೆ ಆರ್ಥಿಕ ಸಲಹೆ ಕೊಡೋರೇನು ಕಡಿಮಿ ಬಿದ್ದಾರೇನು’ ಎಂದ ಬೆಕ್ಕಣ್ಣ, ‘ಹೋಗ್ಲಿಬಿಡು, ನೋಡಿಲ್ಲಿ, ಯೆಡ್ಯೂರಜ್ಜಾರ ಜೋಡಿ ನಮ್ ಕುಮಾರಣ್ಣ ಎಷ್ಟ್ ಚಂದ ಕುಂತಾನೆ’ ಎಂದು ನೂತನ ಸಂಸದರ ಸನ್ಮಾನ ಸಮಾರಂಭದ ಫೋಟೊ ತೋರಿಸಿತು.</p>.<p>‘ಕುಮಾರಣ್ಣ ಹೆಗಲ ಮ್ಯಾಲೆ ತೆನೆಚಿತ್ರದ ಟವೆಲ್ ಬದಲು ಕಮಲದ ಹೂವಿನ ಶಾಲು ಹಾಕ್ಕೊಂಡಾನಲ್ಲ’ ಎಂದೆ. ‘ಬದಲಾವಣೆಯೇ ಜಗದ ನಿಯಮ!’ ಎಂದು ಉದ್ಗರಿಸಿತು ಬೆಕ್ಕಣ್ಣ.</p>.<p>‘ರಾಗಿತೆನೆ-ಕಮಲದಳದ ಸಖ್ಯ ಈಥರಾ <br />ಫೆವಿಕಾಲಿನ್ಹಂಗಿದ್ದರೆ, ಸರ್ಕಾರ ರಚಿಸಬೌದು ಅಂದಾನೆ ನಿಮ್ಮ ಕುಮಾರಣ್ಣ. ಎಷ್ಟು ಲಗೂನೆ ಹಿಂದಿನ ಜಗಳ, ದ್ವೇಷ ಎಲ್ಲಾ ಮರೆತುಬಿಟ್ಟಾರೆ!’</p>.<p>‘ಹೌದು ಮತ್ತೆ… ಕುರ್ಚಿಯಾಸೆಯೇ ಮೈತ್ರಿಗೆ ಮೂಲ’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>