<p>‘ನಾ ಬಿಹಾರದಲ್ಲಿ ಕೆಲಸ ಮಾಡ್ತಿರಬೇಕಿತ್ತು’ ಕೈ ಹಿಸುಕಿಕೊಂಡ ಸಿವಿಲ್ ಎಂಜಿನಿಯರ್ ಮುದ್ದಣ್ಣ.</p>.<p>‘ಹೌದು, ಇಷ್ಟೊತ್ತಿಗೆ ಕೋಟ್ಯಧಿಪತಿಗಳಾಗಿ ಬಿಡ್ತಿದ್ವಿ’ ದನಿಗೂಡಿಸಿದ ಮತ್ತೊಬ್ಬ ಸಿವಿಲ್ ಎಂಜಿನಿಯರ್ ವಿಜಿ.</p>.<p>‘15 ದಿನಗಳಲ್ಲಿ 10 ಸೇತುವೆಗಳು ಬಿದ್ದಿವೆಯಂತೆ. ಈ ಸಂದರ್ಭದಲ್ಲಿ ನಾವು ಬಿಹಾರದಲ್ಲಿ ಇದ್ದಿದ್ದರೆ ಕೈ ತುಂಬಾ ಕೆಲಸ ಸಿಕ್ಕಿರೋದು’ ಮುದ್ದಣ್ಣ ಪುನರುಚ್ಚರಿಸಿದ.</p>.<p>‘ನಾನೂ ಅಲ್ಲೇ ಇರಬೇಕಿತ್ತು’ ಎನ್ನುತ್ತಾ ಬಂದ ನಗರಾಭಿವೃದ್ಧಿ ಪ್ರಾಧಿಕಾರವೊಂದರ ಅಧಿಕಾರಿ.</p>.<p>‘ನಿಮಗೇನ್ ಕಡಿಮೆ ಆಗಿದೆ ಸರ್, ಡಿನೋಟಿಫೈ ಆಗಿದ್ದ ಜಮೀನಿನಲ್ಲೇ ಮತ್ತೆ ಲೇಔಟ್ ಮಾಡಿ ಹಣ ಮಾಡ್ಕೋಬಹುದು, ಸೈಟ್ ಅಲಾಟ್ ಮಾಡೋವಾಗಲೂ ಸೈಡ್ ಇನ್ಕಂ ತಗೋಬಹುದು’ ಕಾಲೆಳೆದ ವಿಜಿ.</p>.<p>‘ಆದರೂ ಒಮ್ಮೆ ಒಂದು ಲೇಔಟ್ ಮಾಡಿದರೆ ಕೆಲಸ ಮುಗಿದಂಗೆ ನಮ್ಮದು. ಆದರೆ, ಈ ರೀತಿ ಸೇತುವೆಗಳನ್ನ ಬೀಳಿಸ್ತಾ, ಮತ್ತೆ ಮತ್ತೆ ಅವೇ ಸೇತುವೆ ನಿರ್ಮಿಸ್ತಾ ದುಡ್ ಮೇಲೆ ದುಡ್ ಮಾಡಬಹುದಲ್ಲ’ ಎಂದು ದೊಡ್ಡ ಅವಕಾಶ ತಪ್ಪಿ ಹೋಯಿತೇನೋ ಎಂಬಂಥ ದುಃಖದಲ್ಲಿ ಹೇಳಿದ ಅಧಿಕಾರಿ.</p>.<p>‘ಅಷ್ಟ್ ಬೇಗ ಪ್ರಾಜೆಕ್ಟ್ ಸ್ಯಾಂಕ್ಷನ್ ಆಗೋದು ಕಷ್ಟ ಬಿಡಿ ಸರ್’ ಎಂದ ಮುದ್ದಣ್ಣ.</p>.<p>‘ಏನ್ರೀ, ಹಾಗಂತೀರ, ಆ ರಾಜ್ಯದ ಸಿಎಂ ಈಗ ಸೆಂಟ್ರಲ್ನಲ್ಲಿ ಪವರ್ಫುಲ್. ಬ್ರಿಡ್ಜ್ ಕುಸೀತಾ ಇದ್ದಂಗೆ ಸಾವಿರಾರು ಕೋಟಿ ರೂಪಾಯಿ ಫಂಡ್ ರಿಲೀಸ್ ಆಗಿಬಿಡುತ್ತೆ’ ನಗುತ್ತಾ ಭವಿಷ್ಯ ನುಡಿದ ಅಧಿಕಾರಿ.</p>.<p>‘ಆದರೂ ನನಗಿನ್ನೂ ಅರ್ಥ ಆಗದಿರೋದು ಏನಂದರೆ, ಹೀಗೆ ದುಬುದುಬು ಅಂತ ಸೇತುವೆ ಬೀಳ್ತಿದ್ರೂ ಈ ಪಾರ್ಟಿಯವರಾಗಲಿ, ಆ ಪಾರ್ಟಿಯವರಾಗಲಿ ಯಾರೂ ಜೋರಾಗಿ ಖಂಡಿಸ್ತಿಲ್ವಲ್ಲ ಯಾಕೆ ಅಂತ’ ಎಂದ ಮುದ್ದಣ್ಣ.</p>.<p>‘ಆ ಸಿಎಂ ಯಾವ ಟೈಮ್ನಲ್ಲಿ ಯಾವ ಅಲಯನ್ಸ್ನಲ್ಲಿ ಇರ್ತಾರೋ ಗೊತ್ತಿಲ್ಲ. ಸುಮ್ನೆ ಯಾಕ್ ರಿಸ್ಕ್ ತಗೊಳೋಣ ಅಂತ ಸರ್ವಪಕ್ಷದವರೂ ಸೈಲೆಂಟ್ ಆಗಿದ್ದಾರೆ’ ಎಂದು ನಕ್ಕ ವಿಜಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಾ ಬಿಹಾರದಲ್ಲಿ ಕೆಲಸ ಮಾಡ್ತಿರಬೇಕಿತ್ತು’ ಕೈ ಹಿಸುಕಿಕೊಂಡ ಸಿವಿಲ್ ಎಂಜಿನಿಯರ್ ಮುದ್ದಣ್ಣ.</p>.<p>‘ಹೌದು, ಇಷ್ಟೊತ್ತಿಗೆ ಕೋಟ್ಯಧಿಪತಿಗಳಾಗಿ ಬಿಡ್ತಿದ್ವಿ’ ದನಿಗೂಡಿಸಿದ ಮತ್ತೊಬ್ಬ ಸಿವಿಲ್ ಎಂಜಿನಿಯರ್ ವಿಜಿ.</p>.<p>‘15 ದಿನಗಳಲ್ಲಿ 10 ಸೇತುವೆಗಳು ಬಿದ್ದಿವೆಯಂತೆ. ಈ ಸಂದರ್ಭದಲ್ಲಿ ನಾವು ಬಿಹಾರದಲ್ಲಿ ಇದ್ದಿದ್ದರೆ ಕೈ ತುಂಬಾ ಕೆಲಸ ಸಿಕ್ಕಿರೋದು’ ಮುದ್ದಣ್ಣ ಪುನರುಚ್ಚರಿಸಿದ.</p>.<p>‘ನಾನೂ ಅಲ್ಲೇ ಇರಬೇಕಿತ್ತು’ ಎನ್ನುತ್ತಾ ಬಂದ ನಗರಾಭಿವೃದ್ಧಿ ಪ್ರಾಧಿಕಾರವೊಂದರ ಅಧಿಕಾರಿ.</p>.<p>‘ನಿಮಗೇನ್ ಕಡಿಮೆ ಆಗಿದೆ ಸರ್, ಡಿನೋಟಿಫೈ ಆಗಿದ್ದ ಜಮೀನಿನಲ್ಲೇ ಮತ್ತೆ ಲೇಔಟ್ ಮಾಡಿ ಹಣ ಮಾಡ್ಕೋಬಹುದು, ಸೈಟ್ ಅಲಾಟ್ ಮಾಡೋವಾಗಲೂ ಸೈಡ್ ಇನ್ಕಂ ತಗೋಬಹುದು’ ಕಾಲೆಳೆದ ವಿಜಿ.</p>.<p>‘ಆದರೂ ಒಮ್ಮೆ ಒಂದು ಲೇಔಟ್ ಮಾಡಿದರೆ ಕೆಲಸ ಮುಗಿದಂಗೆ ನಮ್ಮದು. ಆದರೆ, ಈ ರೀತಿ ಸೇತುವೆಗಳನ್ನ ಬೀಳಿಸ್ತಾ, ಮತ್ತೆ ಮತ್ತೆ ಅವೇ ಸೇತುವೆ ನಿರ್ಮಿಸ್ತಾ ದುಡ್ ಮೇಲೆ ದುಡ್ ಮಾಡಬಹುದಲ್ಲ’ ಎಂದು ದೊಡ್ಡ ಅವಕಾಶ ತಪ್ಪಿ ಹೋಯಿತೇನೋ ಎಂಬಂಥ ದುಃಖದಲ್ಲಿ ಹೇಳಿದ ಅಧಿಕಾರಿ.</p>.<p>‘ಅಷ್ಟ್ ಬೇಗ ಪ್ರಾಜೆಕ್ಟ್ ಸ್ಯಾಂಕ್ಷನ್ ಆಗೋದು ಕಷ್ಟ ಬಿಡಿ ಸರ್’ ಎಂದ ಮುದ್ದಣ್ಣ.</p>.<p>‘ಏನ್ರೀ, ಹಾಗಂತೀರ, ಆ ರಾಜ್ಯದ ಸಿಎಂ ಈಗ ಸೆಂಟ್ರಲ್ನಲ್ಲಿ ಪವರ್ಫುಲ್. ಬ್ರಿಡ್ಜ್ ಕುಸೀತಾ ಇದ್ದಂಗೆ ಸಾವಿರಾರು ಕೋಟಿ ರೂಪಾಯಿ ಫಂಡ್ ರಿಲೀಸ್ ಆಗಿಬಿಡುತ್ತೆ’ ನಗುತ್ತಾ ಭವಿಷ್ಯ ನುಡಿದ ಅಧಿಕಾರಿ.</p>.<p>‘ಆದರೂ ನನಗಿನ್ನೂ ಅರ್ಥ ಆಗದಿರೋದು ಏನಂದರೆ, ಹೀಗೆ ದುಬುದುಬು ಅಂತ ಸೇತುವೆ ಬೀಳ್ತಿದ್ರೂ ಈ ಪಾರ್ಟಿಯವರಾಗಲಿ, ಆ ಪಾರ್ಟಿಯವರಾಗಲಿ ಯಾರೂ ಜೋರಾಗಿ ಖಂಡಿಸ್ತಿಲ್ವಲ್ಲ ಯಾಕೆ ಅಂತ’ ಎಂದ ಮುದ್ದಣ್ಣ.</p>.<p>‘ಆ ಸಿಎಂ ಯಾವ ಟೈಮ್ನಲ್ಲಿ ಯಾವ ಅಲಯನ್ಸ್ನಲ್ಲಿ ಇರ್ತಾರೋ ಗೊತ್ತಿಲ್ಲ. ಸುಮ್ನೆ ಯಾಕ್ ರಿಸ್ಕ್ ತಗೊಳೋಣ ಅಂತ ಸರ್ವಪಕ್ಷದವರೂ ಸೈಲೆಂಟ್ ಆಗಿದ್ದಾರೆ’ ಎಂದು ನಕ್ಕ ವಿಜಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>