ಬಂಗಾಳ ವಿಧಾನಸಭೆ ಕಟ್ಟಡದಲ್ಲಿ ಅಜಯ್ಗೆ ಘೇರಾವೊ, ಹಲ್ಲೆ ಯತ್ನ
ಕಲ್ಕತ್ತ, ಜ. 21– ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಬೆಂಬಲಿಗರೆಂದು ಹೇಳಲಾದ ಕೆಲವು ಮಂದಿ ಮಹಿಳೆಯರೂ ಸೇರಿದ್ದ ವಿದ್ಯಾರ್ಥಿಗಳ ಗುಂಪೊಂದು ಇಂದು ಪಶ್ಚಿಮ ಬಂಗಾಳ ವಿಧಾನಸಭೆಯ ಕಟ್ಟಡದಲ್ಲಿ ಮುಖ್ಯಮಂತ್ರಿ ಶ್ರೀ ಅಜಯ್ ಮುಖರ್ಜಿ ಅವರ ಮೇಲೆ ಹಲ್ಲೆ ನಡೆಸಿ ತೀವ್ರ ಸ್ಫೋಟಕ ಪರಿಸ್ಥಿತಿ ಉಂಟು ಮಾಡಿತು.