<p><strong>ಯು.ಪಿ ವಿಧಾನಸಭೆಯಲ್ಲಿ ಕೋಲಾಹಲ<br />ಲಖನೌ, ಜೂನ್ 30–</strong> ಉತ್ತರಪ್ರದೇಶ ವಿಧಾನಸಭೆಯಲ್ಲಿ ಇಂದು ಸರ್ಕಾರಿ ನಿರ್ಣಯಕ್ಕೆ ಸೋಲು ಸಂಭವಿಸಿದ ನಂತರ ಮುಖ್ಯಮಂತ್ರಿ ಶ್ರೀ ಚರಣ್ಸಿಂಗ್ ಅವರು ಕೋರಿದ ವಿಶ್ವಾಸಮತ ದೊರೆತು, ನಿಶ್ಚಿತ ವೇಳೆಗಿಂತ 40 ನಿಮಿಷ ಮೊದಲೇ ಸಭೆ ಹಠಾತ್ತನೆ ಮುಕ್ತಾಯವಾಯಿತು.</p>.<p>ಸರ್ಕಾರಿ ನಿರ್ಣಯಕ್ಕೆ ಸೋಲಾದ ನಂತರ ಸಭೆಯನ್ನು ಮೊದಲು 15 ನಿಮಿಷಗಳ ಕಾಲ, ಅನಂತರ ಎರಡು ಗಂಟೆಗಳ ಕಾಲ, ಪುನಃ 15 ನಿಮಿಷಗಳ ಕಾಲ– ಹೀಗೆ ಮೂರು ಬಾರಿ ಮುಂದಕ್ಕೆ ಹಾಕಲಾಗಿತ್ತು.</p>.<p>ತಾವು ಜಾಟರೆಂದೂ ಮುಖ್ಯಮಂತ್ರಿಯ ಬಂಧುವೆಂದೂ ಜನರಿಗೆ ಹೇಳುತ್ತಾ ಬಹರೈಚ್ನ ಜಿಲ್ಲಾ ಸರಬರಾಜು ಅಧಿಕಾರಿ ಲಂಚ ತೆಗೆದುಕೊಂಡರೆಂದು ಪ್ರಶ್ನೆಯೊಂದರ ಸಮಯದಲ್ಲಿ ಎಸ್ಎಸ್ಪಿ ನಾಯಕ ಶ್ರೀ ಎ.ಕೆ.ಜೈಸ್ವಾಲ್ ಅವರು ಟೀಕಿಸಿದಾಗ ಸಭೆಯಲ್ಲಿ ಪ್ರಕ್ಷುಬ್ಧ ಸ್ಥಿತಿ ಪ್ರಾರಂಭವಾಯಿತು.</p>.<p><strong>ಕೃಷಿ ಸಂಶೋಧನಾ ಮಂಡಳಿ: ಶಾಸನಬದ್ಧ ಸ್ಥಾನಮಾನ<br />ನವದೆಹಲಿ, ಜೂನ್ 30–</strong> ಭಾರತ ಕೃಷಿ ಸಂಶೋಧನಾ ಮಂಡಳಿಯನ್ನು ಶಾಸನಬದ್ಧ ಸಂಸ್ಥೆಯಾಗಿ ಪರಿವರ್ತಿಸಿ ಅದನ್ನು ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಯೆಂದು ಘೋಷಿಸಲು ಕೇಂದ್ರ ಸಚಿವ ಸಂಪುಟ ಇಂದು ಇಲ್ಲಿ ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯು.ಪಿ ವಿಧಾನಸಭೆಯಲ್ಲಿ ಕೋಲಾಹಲ<br />ಲಖನೌ, ಜೂನ್ 30–</strong> ಉತ್ತರಪ್ರದೇಶ ವಿಧಾನಸಭೆಯಲ್ಲಿ ಇಂದು ಸರ್ಕಾರಿ ನಿರ್ಣಯಕ್ಕೆ ಸೋಲು ಸಂಭವಿಸಿದ ನಂತರ ಮುಖ್ಯಮಂತ್ರಿ ಶ್ರೀ ಚರಣ್ಸಿಂಗ್ ಅವರು ಕೋರಿದ ವಿಶ್ವಾಸಮತ ದೊರೆತು, ನಿಶ್ಚಿತ ವೇಳೆಗಿಂತ 40 ನಿಮಿಷ ಮೊದಲೇ ಸಭೆ ಹಠಾತ್ತನೆ ಮುಕ್ತಾಯವಾಯಿತು.</p>.<p>ಸರ್ಕಾರಿ ನಿರ್ಣಯಕ್ಕೆ ಸೋಲಾದ ನಂತರ ಸಭೆಯನ್ನು ಮೊದಲು 15 ನಿಮಿಷಗಳ ಕಾಲ, ಅನಂತರ ಎರಡು ಗಂಟೆಗಳ ಕಾಲ, ಪುನಃ 15 ನಿಮಿಷಗಳ ಕಾಲ– ಹೀಗೆ ಮೂರು ಬಾರಿ ಮುಂದಕ್ಕೆ ಹಾಕಲಾಗಿತ್ತು.</p>.<p>ತಾವು ಜಾಟರೆಂದೂ ಮುಖ್ಯಮಂತ್ರಿಯ ಬಂಧುವೆಂದೂ ಜನರಿಗೆ ಹೇಳುತ್ತಾ ಬಹರೈಚ್ನ ಜಿಲ್ಲಾ ಸರಬರಾಜು ಅಧಿಕಾರಿ ಲಂಚ ತೆಗೆದುಕೊಂಡರೆಂದು ಪ್ರಶ್ನೆಯೊಂದರ ಸಮಯದಲ್ಲಿ ಎಸ್ಎಸ್ಪಿ ನಾಯಕ ಶ್ರೀ ಎ.ಕೆ.ಜೈಸ್ವಾಲ್ ಅವರು ಟೀಕಿಸಿದಾಗ ಸಭೆಯಲ್ಲಿ ಪ್ರಕ್ಷುಬ್ಧ ಸ್ಥಿತಿ ಪ್ರಾರಂಭವಾಯಿತು.</p>.<p><strong>ಕೃಷಿ ಸಂಶೋಧನಾ ಮಂಡಳಿ: ಶಾಸನಬದ್ಧ ಸ್ಥಾನಮಾನ<br />ನವದೆಹಲಿ, ಜೂನ್ 30–</strong> ಭಾರತ ಕೃಷಿ ಸಂಶೋಧನಾ ಮಂಡಳಿಯನ್ನು ಶಾಸನಬದ್ಧ ಸಂಸ್ಥೆಯಾಗಿ ಪರಿವರ್ತಿಸಿ ಅದನ್ನು ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಯೆಂದು ಘೋಷಿಸಲು ಕೇಂದ್ರ ಸಚಿವ ಸಂಪುಟ ಇಂದು ಇಲ್ಲಿ ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>