<p><strong>ವಿದ್ಯಾರ್ಥಿಗಳಿಗೆ ಅಶ್ರುವಾಯು ಬಳಕೆ</strong></p>.<p><strong>ಬೆಂಗಳೂರು, ಸೆ. 3–</strong> ಕಿಟಕಿ ಬಾಗಿಲುಗಳ ಗಾಜುಗಳನ್ನೊಡೆದು ಮೇಜು ಕುರ್ಚಿಗಳನ್ನು ಹೊರಗೆಳೆದು ಸ್ವತ್ತು ಹಾನಿಗೆ ತೊಡಗಿದ ವಿದ್ಯಾರ್ಥಿಗಳನ್ನು ಚದುರಿಸಲು ಬೆಂಗಳೂರು ವಿಶ್ವವಿದ್ಯಾಲಯದ ಆವರಣಕ್ಕೆ ಇಂದು ಮಧ್ಯಾಹ್ನ ಪೊಲೀಸರನ್ನು ಕರೆಸಲಾಯಿತು.</p>.<p>ಎಕ್ಸ್ಪೋ ಪ್ರವಾಸ ರದ್ದುಗೊಳಿಸುವಂತೆ ಒತ್ತಾಯಪಡಿಸಿ ವಿದ್ಯಾರ್ಥಿಗಳು ಹೂಡಿರುವ ಮುಷ್ಕರ ಹಿಂಸಾಚಾರಕ್ಕೆ ಕಾರಣವಾಯಿತು.</p>.<p><strong>ಮುಷ್ಟಿ ತೋರಿದ ಎಂ.ಪಿಗಳಿಗೆ ಸ್ಪೀಕರ್ ಛೀಮಾರಿ</strong></p>.<p>ನವದೆಹಲಿ, ಸೆ. 3– ಲೋಕಸಭೆಯಲ್ಲಿ ಇಂದು ಕಮ್ಯುನಿಸ್ಟ್ ಮತ್ತು ಜನಸಂಘದ ಇಬ್ಬರು ಸದಸ್ಯರ ನಡುವೆ ಹೊಡೆದಾಟ ನಡೆಯುವವರೆಗೆ ಪರಿಸ್ಥಿತಿ ಪ್ರಕೋಪಕ್ಕಿಟ್ಟುಕೊಂಡು ಗದ್ದಲದ ವಾತಾವರಣ ತಲೆದೋರಿತ್ತು.</p>.<p>ಪರಸ್ಪರ ಅವಹೇಳನದ ನಂತರ ಎಚ್.ಸಿ. ಕಚ್ಚಾಯಿ (ಜನಸಂಘ) ಮತ್ತು ರಾಮ್ ಅವತಾರ್ ಶಾಸ್ತ್ರಿ (ಸಿ.ಪಿ.ಐ) ಅವರು ಒಬ್ಬರ ಕಡೆಗೆ ಒಬ್ಬರು ನುಗ್ಗುತ್ತಿದ್ದಾಗ ಅವರನ್ನು ಸಮಾಧಾನಗೊಳಿಸಲು ಸಹೋದ್ಯೋಗಿಗಳಿಗೆ ಐದು ನಿಮಿಷ ಹಿಡಿಯಿತು.</p>.<p>‘ಸದಸ್ಯರು ಪ್ರತೀ ವಿಷಯವನ್ನೂ ಮುಷ್ಟಿಗಳಿಂದ ತೀರ್ಮಾನಿಸುವುದಾದರೆ ಸಂಸತ್ತಿನ ಅಗತ್ಯವಿಲ್ಲ. ಸಂಸತ್ತಿನಲ್ಲಿ ಕುಳಿತುಕೊಂಡರೆ ವಾದಿಸಬೇಕು. ಪರಸ್ಪರ ಸಹಿಸಿಕೊಳ್ಳಬೇಕು. ಕೂಗಾಟಕ್ಕೆ ಇದೊಂದು ವೇದಿಕೆ ಅಲ್ಲ’ ಎಂದು ಸಭಾಧ್ಯಕ್ಷ ಶ್ರೀ ಜಿ.ಎಸ್.ಧಿಲ್ಲೋನ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿದ್ಯಾರ್ಥಿಗಳಿಗೆ ಅಶ್ರುವಾಯು ಬಳಕೆ</strong></p>.<p><strong>ಬೆಂಗಳೂರು, ಸೆ. 3–</strong> ಕಿಟಕಿ ಬಾಗಿಲುಗಳ ಗಾಜುಗಳನ್ನೊಡೆದು ಮೇಜು ಕುರ್ಚಿಗಳನ್ನು ಹೊರಗೆಳೆದು ಸ್ವತ್ತು ಹಾನಿಗೆ ತೊಡಗಿದ ವಿದ್ಯಾರ್ಥಿಗಳನ್ನು ಚದುರಿಸಲು ಬೆಂಗಳೂರು ವಿಶ್ವವಿದ್ಯಾಲಯದ ಆವರಣಕ್ಕೆ ಇಂದು ಮಧ್ಯಾಹ್ನ ಪೊಲೀಸರನ್ನು ಕರೆಸಲಾಯಿತು.</p>.<p>ಎಕ್ಸ್ಪೋ ಪ್ರವಾಸ ರದ್ದುಗೊಳಿಸುವಂತೆ ಒತ್ತಾಯಪಡಿಸಿ ವಿದ್ಯಾರ್ಥಿಗಳು ಹೂಡಿರುವ ಮುಷ್ಕರ ಹಿಂಸಾಚಾರಕ್ಕೆ ಕಾರಣವಾಯಿತು.</p>.<p><strong>ಮುಷ್ಟಿ ತೋರಿದ ಎಂ.ಪಿಗಳಿಗೆ ಸ್ಪೀಕರ್ ಛೀಮಾರಿ</strong></p>.<p>ನವದೆಹಲಿ, ಸೆ. 3– ಲೋಕಸಭೆಯಲ್ಲಿ ಇಂದು ಕಮ್ಯುನಿಸ್ಟ್ ಮತ್ತು ಜನಸಂಘದ ಇಬ್ಬರು ಸದಸ್ಯರ ನಡುವೆ ಹೊಡೆದಾಟ ನಡೆಯುವವರೆಗೆ ಪರಿಸ್ಥಿತಿ ಪ್ರಕೋಪಕ್ಕಿಟ್ಟುಕೊಂಡು ಗದ್ದಲದ ವಾತಾವರಣ ತಲೆದೋರಿತ್ತು.</p>.<p>ಪರಸ್ಪರ ಅವಹೇಳನದ ನಂತರ ಎಚ್.ಸಿ. ಕಚ್ಚಾಯಿ (ಜನಸಂಘ) ಮತ್ತು ರಾಮ್ ಅವತಾರ್ ಶಾಸ್ತ್ರಿ (ಸಿ.ಪಿ.ಐ) ಅವರು ಒಬ್ಬರ ಕಡೆಗೆ ಒಬ್ಬರು ನುಗ್ಗುತ್ತಿದ್ದಾಗ ಅವರನ್ನು ಸಮಾಧಾನಗೊಳಿಸಲು ಸಹೋದ್ಯೋಗಿಗಳಿಗೆ ಐದು ನಿಮಿಷ ಹಿಡಿಯಿತು.</p>.<p>‘ಸದಸ್ಯರು ಪ್ರತೀ ವಿಷಯವನ್ನೂ ಮುಷ್ಟಿಗಳಿಂದ ತೀರ್ಮಾನಿಸುವುದಾದರೆ ಸಂಸತ್ತಿನ ಅಗತ್ಯವಿಲ್ಲ. ಸಂಸತ್ತಿನಲ್ಲಿ ಕುಳಿತುಕೊಂಡರೆ ವಾದಿಸಬೇಕು. ಪರಸ್ಪರ ಸಹಿಸಿಕೊಳ್ಳಬೇಕು. ಕೂಗಾಟಕ್ಕೆ ಇದೊಂದು ವೇದಿಕೆ ಅಲ್ಲ’ ಎಂದು ಸಭಾಧ್ಯಕ್ಷ ಶ್ರೀ ಜಿ.ಎಸ್.ಧಿಲ್ಲೋನ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>