ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪರಶುರಾಮ ವಾಘ್ಮೋರೆ ಪೋಷಕರಿಂದ ಹೇಳಿಕೆ ಸಂಗ್ರಹ

Last Updated 16 ಜೂನ್ 2018, 7:02 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಬಂಧಿಸಲಾಗಿರುವ ಪರಶುರಾಮ ವಾಘ್ಮೋರೆಯ ಪೋಷಕರಿಂದ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಹೇಳಿಕೆ ಪಡೆಯುತ್ತಿದ್ದಾರೆ. 

ವಿಜಯಪುರದಿಂದ ಬೆಳಿಗ್ಗೆಯೇ ನಗರಕ್ಕೆ ಬಂದಿರುವ ಪೋಷಕರು ಎಸ್ಐಟಿ ಎದುರು ಹಾಜರಾಗಿದ್ದಾರೆ.

ಈ ವೇಳೆಯೇ ಎಸ್ಐಟಿ ಅಧಿಕಾರಿಗಳು ಮಗನ ವರ್ತನೆ ಬಗ್ಗೆ ತಂದೆ ತಾಯಿಯಿಂದ ಮಾಹಿತಿ ಪಡೆಯಲಿದ್ದಾರೆ .

ಶ್ರೀರಾಮಸೇನೆ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ರಾಕೇಶ್ ಮಠ ಸಹ ವಿಚಾರಣೆಗೆ ಬಂದಿದ್ದು, 'ಎಸ್ಐಟಿ ಅಧಿಕಾರಿಗಳು ಬರಲು ಸೂಚಿಸಿದ್ದಾರೆ. ಹಾಗಾಗಿ ಬಂದಿದ್ದೇನೆ. ತನಿಖೆಗೆ ಸಹಕರಿಸುತ್ತೇನೆ' ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT