<p><strong>ಜೆ.ಎಚ್. ಪಟೇಲರ ‘ನನಸಾದ ಕನಸು’:ಲೋಕಸಭೆಯಲ್ಲಿ ಕನ್ನಡ</strong></p>.<p><strong>ನವದೆಹಲಿ, ನ. 18–</strong> ಲೋಕಸಭೆಯಲ್ಲಿ ಕನ್ನಡದಲ್ಲಿ ಮಾಡುವ ಭಾಷಣಗಳನ್ನು ಏಕಕಾಲದಲ್ಲಿ ಹಿಂದಿ ಮತ್ತು ಇಂಗ್ಲಿಷಿಗೆ ಅನುವಾದ ಮಾಡುವ ಸೌಲಭ್ಯವನ್ನು ಈಗ ಕಲ್ಪಿಸಲಾಗಿದೆ.</p>.<p>ಪ್ರಸಕ್ತ ಅಧಿವೇಶನ ಆರಂಭವಾದಾಗಿನಿಂದಲೂ ಕನ್ನಡದಲ್ಲಿ ಭಾಷಣ ಮಾಡಲು ಒತ್ತಾಯಿಸುತ್ತಿದ್ದ ಮೈಸೂರಿನ ಎಸ್ಸೆಸ್ಪಿ ಸದಸ್ಯ ಶ್ರೀ ಜೆ.ಎಚ್. ಪಟೇಲ್ ಅವರೇ ಈ ಕ್ರಮ ಜಾರಿಗೆ ಬರಲು ಕಾರಣಕರ್ತರು.</p>.<p>ಇಂಥ ಈ ವ್ಯವಸ್ಥೆ ಜಾರಿಗೆ ತಂದ ಕೂಡಲೇ ದಕ್ಷಿಣ ರಾಜ್ಯಗಳ ಸದಸ್ಯರು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.</p>.<p><strong>ಜಗಜೀವನರಾಂಗೆ ದಂಡ ವಿಧಿಸದಿದ್ದಕ್ಕೆ ಛೀಮಾರಿ, ಗೊಂದಲ</strong></p>.<p>ನವದೆಹಲಿ, ನ. 18– ಹತ್ತು ವರ್ಷಗಳಿಂದ ವರಮಾನ ತೆರಿಗೆ ಪಾವತಿ ಮಾಡದಿದ್ದುದಕ್ಕಾಗಿ ಆಹಾರ ಸಚಿವ ಜಗಜೀವನರಾಂ ಅವರ ಮೇಲೆ ವರಮಾನ ತೆರಿಗೆ ಕಮೀಷನರ್ ದಂಡ ವಿಧಿಸಿಲ್ಲವೆಂದು ಇಂದು ರಾಜ್ಯಸಭೆಯಲ್ಲಿ ಸಚಿವ ಸೇಠಿ ತಿಳಿಸಿದಾಗ ವಿರೋಧ ಪಕ್ಷದ ಸದಸ್ಯರು ‘ನಾಚಿಕೆಗೇಡು, ನಾಚಿಕೆಗೇಡು’ ಎಂದು ಕೂಗಿದರಲ್ಲದೆ ಭಾರಿ ಗೊಂದಲವುಂಟಾಯಿತು.</p>.<p>ಈ ಬಗೆಯ ಪಕ್ಷಪಾತದ ವಿರುದ್ಧ ವಿವಿಧ ಪಕ್ಷಗಳು ತೀವ್ರವಾಗಿ ಪ್ರತಿಭಟಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೆ.ಎಚ್. ಪಟೇಲರ ‘ನನಸಾದ ಕನಸು’:ಲೋಕಸಭೆಯಲ್ಲಿ ಕನ್ನಡ</strong></p>.<p><strong>ನವದೆಹಲಿ, ನ. 18–</strong> ಲೋಕಸಭೆಯಲ್ಲಿ ಕನ್ನಡದಲ್ಲಿ ಮಾಡುವ ಭಾಷಣಗಳನ್ನು ಏಕಕಾಲದಲ್ಲಿ ಹಿಂದಿ ಮತ್ತು ಇಂಗ್ಲಿಷಿಗೆ ಅನುವಾದ ಮಾಡುವ ಸೌಲಭ್ಯವನ್ನು ಈಗ ಕಲ್ಪಿಸಲಾಗಿದೆ.</p>.<p>ಪ್ರಸಕ್ತ ಅಧಿವೇಶನ ಆರಂಭವಾದಾಗಿನಿಂದಲೂ ಕನ್ನಡದಲ್ಲಿ ಭಾಷಣ ಮಾಡಲು ಒತ್ತಾಯಿಸುತ್ತಿದ್ದ ಮೈಸೂರಿನ ಎಸ್ಸೆಸ್ಪಿ ಸದಸ್ಯ ಶ್ರೀ ಜೆ.ಎಚ್. ಪಟೇಲ್ ಅವರೇ ಈ ಕ್ರಮ ಜಾರಿಗೆ ಬರಲು ಕಾರಣಕರ್ತರು.</p>.<p>ಇಂಥ ಈ ವ್ಯವಸ್ಥೆ ಜಾರಿಗೆ ತಂದ ಕೂಡಲೇ ದಕ್ಷಿಣ ರಾಜ್ಯಗಳ ಸದಸ್ಯರು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.</p>.<p><strong>ಜಗಜೀವನರಾಂಗೆ ದಂಡ ವಿಧಿಸದಿದ್ದಕ್ಕೆ ಛೀಮಾರಿ, ಗೊಂದಲ</strong></p>.<p>ನವದೆಹಲಿ, ನ. 18– ಹತ್ತು ವರ್ಷಗಳಿಂದ ವರಮಾನ ತೆರಿಗೆ ಪಾವತಿ ಮಾಡದಿದ್ದುದಕ್ಕಾಗಿ ಆಹಾರ ಸಚಿವ ಜಗಜೀವನರಾಂ ಅವರ ಮೇಲೆ ವರಮಾನ ತೆರಿಗೆ ಕಮೀಷನರ್ ದಂಡ ವಿಧಿಸಿಲ್ಲವೆಂದು ಇಂದು ರಾಜ್ಯಸಭೆಯಲ್ಲಿ ಸಚಿವ ಸೇಠಿ ತಿಳಿಸಿದಾಗ ವಿರೋಧ ಪಕ್ಷದ ಸದಸ್ಯರು ‘ನಾಚಿಕೆಗೇಡು, ನಾಚಿಕೆಗೇಡು’ ಎಂದು ಕೂಗಿದರಲ್ಲದೆ ಭಾರಿ ಗೊಂದಲವುಂಟಾಯಿತು.</p>.<p>ಈ ಬಗೆಯ ಪಕ್ಷಪಾತದ ವಿರುದ್ಧ ವಿವಿಧ ಪಕ್ಷಗಳು ತೀವ್ರವಾಗಿ ಪ್ರತಿಭಟಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>