ನವದೆಹಲಿ, ನ. 18– ಹತ್ತು ವರ್ಷಗಳಿಂದ ವರಮಾನ ತೆರಿಗೆ ಪಾವತಿ ಮಾಡದಿದ್ದುದಕ್ಕಾಗಿ ಆಹಾರ ಸಚಿವ ಜಗಜೀವನರಾಂ ಅವರ ಮೇಲೆ ವರಮಾನ ತೆರಿಗೆ ಕಮೀಷನರ್ ದಂಡ ವಿಧಿಸಿಲ್ಲವೆಂದು ಇಂದು ರಾಜ್ಯಸಭೆಯಲ್ಲಿ ಸಚಿವ ಸೇಠಿ ತಿಳಿಸಿದಾಗ ವಿರೋಧ ಪಕ್ಷದ ಸದಸ್ಯರು ‘ನಾಚಿಕೆಗೇಡು, ನಾಚಿಕೆಗೇಡು’ ಎಂದು ಕೂಗಿದರಲ್ಲದೆ ಭಾರಿ ಗೊಂದಲವುಂಟಾಯಿತು.