ದೈಹಿಕವಾಗಿ ನಾವು ಸಮರ್ಥರಾಗಿಯೇ ಇರುತ್ತೇವೆ. ಆದರೆ ಮನೋದಾರ್ಢ್ಯ ಇರಬೇಕಾಗು ತ್ತದೆ. ಆಗ ಗುರಿ ಮುಟ್ಟಲು ಸಾಧ್ಯ. ಮೊದಲ ಕೆಲವು ಪಂದ್ಯಗಳಲ್ಲಿ 70–80 ರನ್ ಹೊಡೆದೆ. ಆದರೆ ಶತಕದ ಹಾದಿಯಲ್ಲಿ ಎಡವುತ್ತಿದ್ದೆ. ಈಗ
ಆ ಹಂತವನ್ನು ನಿಭಾಯಿಸಲು ಬೇಕಾಗುವ ಏಕಾಗ್ರತೆ, ತಾಳ್ಮೆ ಮತ್ತು ಮಾನಸಿಕ ನಿರಾಳತೆಯನ್ನು ರೂಢಿಸಿಕೊಳ್ಳುತ್ತಿದ್ದೇನೆ. ಕೋಚ್ ಯರೇಗೌಡ ಮತ್ತು ಈ ಹಿಂದೆ ಡಬ್ಲ್ಯು.ವಿ. ರಾಮನ್ ಅವರ ಸಲಹೆಗಳು ನನಗೆ ಬಹಳ ಉಪಯುಕ್ತವಾಗಿವೆ.