12. ನೌಟಂಕಿಗಳು, ಉದ್ಯಮಿಗಳಂತೆ ರೈತರೂ ಕಾರಿನಲ್ಲಿ, ವಿಮಾನದಲ್ಲಿ ಬಂದರೆ ಮಾತ್ರ ರಾಜನನ್ನು ಭೇಟಿಯಾಗಲು ಸಾಧ್ಯ.
13. ಹತ್ತಿಪ್ಪತ್ತು ಸಾವಿರ ಸಾಲ ಮಾಡಬಾರದು. ಸಾಲ ಕಡೇಪಕ್ಷ ಸಾವಿರ ಕೋಟಿಗೂ ಅಧಿಕವಾಗಿರಬೇಕು.
14. ಆಧಾರ್ ಬೇಡವೆಂದು ಕೋರ್ಟು ಹೇಳಿದರೂ ನಾನು ನಿಯತ್ತಾಗಿ ನನ್ನ ಬ್ಯಾಂಕ್ ಅಕೌಂಟಿಗೆ, ಇತರೆಡೆ ಅದನ್ನು ಲಗತ್ತಿಸಬೇಕು. ಆದ್ದರಿಂದ ಕೋರ್ಟಿನ ತೀರ್ಮಾನವೇ ಅಂತಿಮವಲ್ಲ.
15. ನನ್ನ ಮನೆಯ ಬೇಳೆಬೇಯದಿರಲು ನೆಹರುಕಾರಣ.
16. ನಾನು ಬಿಜೆಪಿಯನ್ನು ಒಪ್ಪದಿದ್ದರೆ, ನಾನು ಕಾಂಗಿ ಎಂದೇ ಲೋಕಾರ್ಥ. ಬೇರೇ ಆಗಲು ಸಾಧ್ಯವೇ ಇಲ್ಲ.
17. ಫೇಸ್ಬುಕ್ನಲ್ಲಿಐದು ವಾಕ್ಯಗಳಿಗಿಂತ ಹೆಚ್ಚುಬರೆಯಬಾರದು. ಹಾಗೆ ಬರೆದರೆ ಯಾರೂ ಓದದೆಲೈಕ್ ಒತ್ತುತ್ತಾರೆ, ಕಾಮೆಂಟೂ ಮಾಡುತ್ತಾರೆ.
ಇದಿಷ್ಟೇ ಅಲ್ಲ,ಇನ್ನೂ ಹಲವು ಪಾಠಗಳನ್ನು ಕಲಿತಿದ್ದೇನೆ. ಸದ್ಯನೆನಪಿರುವಷ್ಟನ್ನು ಮಾತ್ರ ಇಲ್ಲಿ ಹೇಳಲು ಸಾಧ್ಯವಾಗಿದೆ. ಕಳೆದ ವರ್ಷ ಕಲಿತವನ್ನು ಇಲ್ಲಿ ಹಾಕಿದರೆ ಪಟ್ಟಿ ಇನ್ನೂ ಉದ್ದವಾಗುತ್ತದೆ.