‘ಸರ್ಕಾರ ವರ್ಸೊಪ್ಪತ್ತೂ ಮಿನಿಸ್ಟ್ರಿಗೆ, ಸರ್ಕಾರಿ ಆಪೀಸುಗಳಿಗೆ ಕರ್ಟನ್ನು, ಗೆಸ್ಟೌಸುಗಳಿಗೆ ಹಾಸಕೆ, ಹೊದಿಯಕೆ ಪಾಲಿಯೆಸ್ಟರ್, ಲಿನನ್ ಬಟ್ಟೆಗಳನ್ನ ಕೋಟಿಗಟ್ಲೆ ಖರ್ಚು ಮಾಡಿ ಅಂಗಡಿಗಳಿಂದ ಖರೀದಿ ಮಾಡ್ತದೆ. ಬಸಣ್ಣ ‘ಇನ್ನು ಮೇಲೆ ಸರ್ಕಾರ ಖರೀದಿ ಮಾಡೋ ಎಲ್ಲಾ ಬಟ್ಟೆ ಖಾದಿ ಭಂಡಾರದ್ದೇ ಆಗಬೇಕು’ ಅಂತ ಖಟ್ನಿಟ್ ಆದೇಸ ಹೊಂಡುಸಿದ್ರೆ ಖಾದಿ ಉದ್ಯಮ ಉದ್ಧಾರಾಯ್ತದೆ. ಗಾಂಧೀಜಿ ತತ್ವ ಪಾಲನೇನೂ ಆಯ್ತದೆ’ ಅಂತ ಭಾಷಣ ಕೊಟ್ಟೆ.