ಅಬ್ಬರವಿಲ್ಲದ ಪ್ರಚಾರ: ಶೇಷನ್ ಕ್ರಮಕ್ಕೆ ಪ್ರಧಾನಿ ಕುಮ್ಮಕ್ಕು
ಬೆಂಗಳೂರು, ನ. 12– ಜೀಪು, ಕಾರುಗಳಲ್ಲಿ ಶರವೇಗದಿಂದ ಸಂಚರಿಸಿ ನಡೆಯುತ್ತಿದ್ದ ಅಬ್ಬರದ ಪ್ರಚಾರಕ್ಕೆ ಕಡಿವಾಣ ಹಾಕಿದ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರ ಕ್ರಮವನ್ನು ಕಾಂಗೈ ಅಧ್ಯಕ್ಷ ಮತ್ತು ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಮುಕ್ತಕಂಠದಿಂದ ಶ್ಲಾಘಿಸಿದರು.