ಷೇರು ಹಗರಣ: ಶಂಕರಾನಂದ, ಠಾಕೂರ್ ವಿರುದ್ಧ ಕ್ರಮಕ್ಕೆ ಕೇಂದ್ರ ನಕಾರ
ನವದೆಹಲಿ, ನ. 7– ಷೇರು ಹಗರಣದಲ್ಲಿ ತಪ್ಪಿತಸ್ಥರು ಎಂದು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಆರೋಪಿಸಿರುವ ಇಬ್ಬರು ಕೇಂದ್ರ ಸಚಿವರುಗಳಾದ ಬಿ. ಶಂಕರಾನಂದ ಹಾಗೂ ರಾಮೇಶ್ವರ ಠಾಕೂರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಪ್ರತಿಪಕ್ಷಗಳ ಆಗ್ರಹವನ್ನು ಸರ್ಕಾರ ಇಂದು ತಳ್ಳಿಹಾಕಿತು.