<p><strong>ಪಾಕಿಸ್ತಾನಕ್ಕೆ ಬ್ರಿಟನ್ ತರಾಟೆ</strong></p><p><strong>ನವದೆಹಲಿ, ಜುಲೈ 1–</strong> ಕಾರ್ಗಿಲ್ ವಲಯಕ್ಕೆ ನುಸುಳಿ ಅದನ್ನು ಆಕ್ರಮಿಸಿಕೊಳ್ಳುವ ಪ್ರಯತ್ನವು ‘ಗಂಭೀರ ಸಮಸ್ಯೆ’ಯನ್ನು ಉಂಟು ಮಾಡಲಿದೆ ಎಂಬುದಾಗಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಪಾಕಿಸ್ತಾನಿ ಪ್ರಧಾನಿಗೆ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.</p>.<p>ಕಾರ್ಗಿಲ್ ವಲಯದಲ್ಲಿ ಉಂಟಾಗಿರುವ ಪಾಕಿಸ್ತಾನಿ ಸೈನಿಕರ ಅತಿಕ್ರಮಣಕಾರಿ ಘಟನೆಯ ಬಗೆಗೆ ಭಾರತವು ಅಂತರರಾಷ್ಟ್ರೀಯ ಬೆಂಬಲ ಗಳಿಸಲು ನಡೆಸಿರುವ ಯತ್ನದಲ್ಲಿ ಈಗ ಮತ್ತೊಂದು ಪ್ರಬಲ ರಾಷ್ಟ್ರವಾದ ಬ್ರಿಟನ್ನ ಬೆಂಬಲ ಗಳಿಸುವಲ್ಲಿ ಯಶಸ್ವಿಯಾದಂತಾಗಿದೆ.</p>.<p><strong>ಬತ್ತಿದ ಬಾವಿಗಳ ವಿದ್ಯುತ್ ಬಿಲ್ ಬಾಕಿ ಮನ್ನಾ</strong></p><p><strong>ಬೆಂಗಳೂರು, ಜುಲೈ 1</strong>– ನೈಸರ್ಗಿಕ ಕಾರಣಗಳಿಂದ ನೀರು ಬತ್ತಿಹೋಗಿರುವ ತೆರೆದ ಬಾವಿಗಳ ರೈತರು ಕೆಇಬಿಗೆ ಕೊಡಬೇಕಾಗಿರುವ ವಿದ್ಯುತ್ ದರದ ಬಾಕಿ ಅದರ ಮೇಲಿನ ಬಡ್ಡಿ ಹಾಗೂ ಸುಸ್ತಿಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ಕೃಷಿ ಸಚಿವ ಸಿ. ಬೈರೇಗೌಡ ಅವರು ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು.</p>.<p>ಬಾವಿಗಳಲ್ಲಿ ನೀರಿಲ್ಲದೆ ಇದ್ದರೂ ವಿದ್ಯುತ್ ಸಂಪರ್ಕ ಬೇಡವೆಂದು ಕೆಇಬಿಗೆ ತಿಳಿಸದೆ ಅನೇಕ ರೈತರು ಉಪಯೋಗಿಸದಿರುವ ವಿದ್ಯುತ್ಗೆ ಬಾಕಿ ಕೊಡಬೇಕಾಗಿದೆ. ರೈತರು ಈ ಸಂಬಂಧ ವಿದ್ಯುತ್ ಸಂಪರ್ಕ ಬೇಡವೆಂದು ಕೆಇಬಿಗೆ ತಿಳಿಸಿ ವಿದ್ಯುತ್ ಸಂಪರ್ಕವನ್ನು ಹಿಂತಿರುಗಿಸಿದ ರೈತರಿಗೆ ಬಾಕಿ ಮನ್ನಾದ ಅನುಕೂಲ ದೊರೆಯುತ್ತದೆ ಎಂದು ಶೂನ್ಯವೇಳೆಯಲ್ಲಿ ಸಚಿವರು ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಕಿಸ್ತಾನಕ್ಕೆ ಬ್ರಿಟನ್ ತರಾಟೆ</strong></p><p><strong>ನವದೆಹಲಿ, ಜುಲೈ 1–</strong> ಕಾರ್ಗಿಲ್ ವಲಯಕ್ಕೆ ನುಸುಳಿ ಅದನ್ನು ಆಕ್ರಮಿಸಿಕೊಳ್ಳುವ ಪ್ರಯತ್ನವು ‘ಗಂಭೀರ ಸಮಸ್ಯೆ’ಯನ್ನು ಉಂಟು ಮಾಡಲಿದೆ ಎಂಬುದಾಗಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಪಾಕಿಸ್ತಾನಿ ಪ್ರಧಾನಿಗೆ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.</p>.<p>ಕಾರ್ಗಿಲ್ ವಲಯದಲ್ಲಿ ಉಂಟಾಗಿರುವ ಪಾಕಿಸ್ತಾನಿ ಸೈನಿಕರ ಅತಿಕ್ರಮಣಕಾರಿ ಘಟನೆಯ ಬಗೆಗೆ ಭಾರತವು ಅಂತರರಾಷ್ಟ್ರೀಯ ಬೆಂಬಲ ಗಳಿಸಲು ನಡೆಸಿರುವ ಯತ್ನದಲ್ಲಿ ಈಗ ಮತ್ತೊಂದು ಪ್ರಬಲ ರಾಷ್ಟ್ರವಾದ ಬ್ರಿಟನ್ನ ಬೆಂಬಲ ಗಳಿಸುವಲ್ಲಿ ಯಶಸ್ವಿಯಾದಂತಾಗಿದೆ.</p>.<p><strong>ಬತ್ತಿದ ಬಾವಿಗಳ ವಿದ್ಯುತ್ ಬಿಲ್ ಬಾಕಿ ಮನ್ನಾ</strong></p><p><strong>ಬೆಂಗಳೂರು, ಜುಲೈ 1</strong>– ನೈಸರ್ಗಿಕ ಕಾರಣಗಳಿಂದ ನೀರು ಬತ್ತಿಹೋಗಿರುವ ತೆರೆದ ಬಾವಿಗಳ ರೈತರು ಕೆಇಬಿಗೆ ಕೊಡಬೇಕಾಗಿರುವ ವಿದ್ಯುತ್ ದರದ ಬಾಕಿ ಅದರ ಮೇಲಿನ ಬಡ್ಡಿ ಹಾಗೂ ಸುಸ್ತಿಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ಕೃಷಿ ಸಚಿವ ಸಿ. ಬೈರೇಗೌಡ ಅವರು ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು.</p>.<p>ಬಾವಿಗಳಲ್ಲಿ ನೀರಿಲ್ಲದೆ ಇದ್ದರೂ ವಿದ್ಯುತ್ ಸಂಪರ್ಕ ಬೇಡವೆಂದು ಕೆಇಬಿಗೆ ತಿಳಿಸದೆ ಅನೇಕ ರೈತರು ಉಪಯೋಗಿಸದಿರುವ ವಿದ್ಯುತ್ಗೆ ಬಾಕಿ ಕೊಡಬೇಕಾಗಿದೆ. ರೈತರು ಈ ಸಂಬಂಧ ವಿದ್ಯುತ್ ಸಂಪರ್ಕ ಬೇಡವೆಂದು ಕೆಇಬಿಗೆ ತಿಳಿಸಿ ವಿದ್ಯುತ್ ಸಂಪರ್ಕವನ್ನು ಹಿಂತಿರುಗಿಸಿದ ರೈತರಿಗೆ ಬಾಕಿ ಮನ್ನಾದ ಅನುಕೂಲ ದೊರೆಯುತ್ತದೆ ಎಂದು ಶೂನ್ಯವೇಳೆಯಲ್ಲಿ ಸಚಿವರು ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>