ನವದೆಹಲಿ, ನವೆಂಬರ್ 5– ಉತ್ತರಪ್ರದೇಶ ವಿದ್ಯಮಾನದಂಥ ‘ಕೀಳು ರಾಜಕೀಯ ತಂತ್ರ’ಕ್ಕೆ ಕಡಿವಾಣ ಹಾಕುವ ಸಲುವಾಗಿ ಪಕ್ಷಾಂತರ ನಿಷೇಧ ಮಸೂದೆಗೆ ತಿದ್ದುಪಡಿ ತರಲು ಸಂಯುಕ್ತ ರಂಗ ಸರ್ಕಾರ ನಿರ್ಧರಿಸಿದೆ. ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ರಂಗದ ವಕ್ತಾರ ಜೈಪಾಲ್ ರೆಡ್ಡಿ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.