ಶಿಮ್ಲಾ, ಜೂನ್ 15 (ಪಿಟಿಐ)– ಉನ್ನತ ಹಂತಗಳಲ್ಲಿ ಭ್ರಷ್ಟಾಚಾರ ತೊಡೆದುಹಾಕಲು ತಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಪ್ರಧಾನಿ ಐ.ಕೆ.ಗುಜ್ರಾಲ್ ಪುನರುಚ್ಚರಿಸಿದ್ದಾರೆ.
ಸಾರ್ವಜನಿಕ ರ್ಯಾಲಿಯನ್ನು ಇಲ್ಲಿ ಉದ್ಘಾಟಿಸಿದ ಅವರು ಯಾರು ಎಂಥದ್ದೇ ಉನ್ನತ ಹುದ್ದೆಯಲ್ಲಿರಲಿ ಅಥವಾ ಎಷ್ಟೇ ಪ್ರಭಾವಶಾಲಿಯಾಗಿರಲಿ ಭ್ರಷ್ಟಾಚಾರ ನಡೆಸಿರುವುದು ಕಂಡುಬಂದರೆ ಕ್ರಮ ಜರುಗಿಸದೇ ಬಿಡುವುದಿಲ್ಲ ಎಂದರು.
ಸಿಂಗ್ ಭೇಟಿ ಮಾಡಿದ ಪಟೇಲ್
ಬೆಂಗಳೂರು, ಜೂನ್ 15– ಲಂಡನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರನ್ನು ಮುಖ್ಯ ಮಂತ್ರಿ ಜೆ.ಎಚ್.ಪಟೇಲ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಕರ್ನಾಟಕಕ್ಕೆ ಬಂಡವಾಳ ಹೂಡಿಕೆದಾರ ರನ್ನು ಸೆಳೆಯುವ ಸಲುವಾಗಿ ಬ್ರಿಟನ್ ಮತ್ತು ಅಮೆರಿಕಕ್ಕೆ ನಿಯೋಗದೊಂದಿಗೆ ತೆರಳಿರುವ ಪಟೇಲ್, ನಿನ್ನೆ ಲಂಡನ್ಗೆ ತೆರಳಿದ ಕೂಡಲೇ ಸಿಂಗ್ ಅವರನ್ನು ಭೇಟಿ ಮಾಡಿದರು.