<p>ಬೆಂಗಳೂರು, ಫೆ. 11– ಬಹಳ ದಿನಗಳಿಂದ ನಿರೀಕ್ಷಿಸಲಾಗಿದ್ದ ಅಮೆರಿಕದ ನಾಸ್ಡಾಕ್ ಷೇರುಪೇಟೆಯ ಭಾರತೀಯ ಕಚೇರಿ ನಾಳೆ ಇಲ್ಲಿ ಆರಂಭವಾಗಲಿದೆ.</p>.<p>ಷೇರುಪೇಟೆಯಲ್ಲಿ ವಿಶ್ವದಲ್ಲೇ ಪ್ರಮುಖ ಸ್ಥಾನ ಹೊಂದಿರುವ ನಾಸ್ಡಾಕ್ ಕಚೇರಿ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವುದು ರಾಷ್ಟ್ರದ ಗಮನ ಸೆಳೆದಿದೆ. </p>.<p>‘ಭಾರತೀಯ ಕಂಪನಿಗಳು ಇನ್ನೂ ಹತ್ತು ವರ್ಷಗಳ ಕಾಲ ಷೇರುಪೇಟೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ನಾಸ್ಡಾಕ್ ನಿರೀಕ್ಷಿಸುತ್ತಿದೆ’ ಎಂದು ಷೇರು ಮಾರುಕಟ್ಟೆಯ ಉಪಾಧ್ಯಕ್ಷ ಆಲ್ಫ್ರೆಡ್ ಬರ್ಕ್ಲಿ (ಜ್ಯೂನಿಯರ್–3) ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<p><strong>ಉಗ್ರಗಾಮಿಗಳ ದಾಳಿಗೆ ಬೀರೂರಿನ ಯೋಧ ಬಲಿ</strong></p>.<p>ಚಿಕ್ಕಮಗಳೂರು, ಫೆ. 11– ಮಣಿಪುರದಲ್ಲಿ ಬೋಡೋ ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಬೀರೂರು ಬಳಿಯ ಬೋಕಿಕೆರೆಯ ವೀರಯೋಧ ಎಚ್. ಸಣ್ಣಗೋವಿಂದಪ್ಪ (36) ಅವರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ಶನಿವಾರ ನಡೆಯಿತು.</p>.<p>ಕಳೆದ ಹದಿನೈದು ವರ್ಷಗಳಿಂದ ಗಡಿಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಕಳೆದ ಗುರುವಾರ ಮಣಿಪುರದ ಚಂದ್ರಪುರ ಜಿಲ್ಲೆಯಲ್ಲಿ ಯೋಧರನ್ನು ಗಡಿರಕ್ಷಣಾ ಕಾರ್ಯಕ್ಕೆ ಆಯಕಟ್ಟಿನ ಜಾಗಕ್ಕೆ ಬಿಟ್ಟುಬರಲು ಹೋಗಿದ್ದ ಸಂದರ್ಭದಲ್ಲಿ ಉಗ್ರಗಾಮಿಗಳ ಗುಂಡಿನ ದಾಳಿಗೆ ಸಿಲುಕಿ ಜೀವತೆತ್ತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು, ಫೆ. 11– ಬಹಳ ದಿನಗಳಿಂದ ನಿರೀಕ್ಷಿಸಲಾಗಿದ್ದ ಅಮೆರಿಕದ ನಾಸ್ಡಾಕ್ ಷೇರುಪೇಟೆಯ ಭಾರತೀಯ ಕಚೇರಿ ನಾಳೆ ಇಲ್ಲಿ ಆರಂಭವಾಗಲಿದೆ.</p>.<p>ಷೇರುಪೇಟೆಯಲ್ಲಿ ವಿಶ್ವದಲ್ಲೇ ಪ್ರಮುಖ ಸ್ಥಾನ ಹೊಂದಿರುವ ನಾಸ್ಡಾಕ್ ಕಚೇರಿ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವುದು ರಾಷ್ಟ್ರದ ಗಮನ ಸೆಳೆದಿದೆ. </p>.<p>‘ಭಾರತೀಯ ಕಂಪನಿಗಳು ಇನ್ನೂ ಹತ್ತು ವರ್ಷಗಳ ಕಾಲ ಷೇರುಪೇಟೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ನಾಸ್ಡಾಕ್ ನಿರೀಕ್ಷಿಸುತ್ತಿದೆ’ ಎಂದು ಷೇರು ಮಾರುಕಟ್ಟೆಯ ಉಪಾಧ್ಯಕ್ಷ ಆಲ್ಫ್ರೆಡ್ ಬರ್ಕ್ಲಿ (ಜ್ಯೂನಿಯರ್–3) ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<p><strong>ಉಗ್ರಗಾಮಿಗಳ ದಾಳಿಗೆ ಬೀರೂರಿನ ಯೋಧ ಬಲಿ</strong></p>.<p>ಚಿಕ್ಕಮಗಳೂರು, ಫೆ. 11– ಮಣಿಪುರದಲ್ಲಿ ಬೋಡೋ ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಬೀರೂರು ಬಳಿಯ ಬೋಕಿಕೆರೆಯ ವೀರಯೋಧ ಎಚ್. ಸಣ್ಣಗೋವಿಂದಪ್ಪ (36) ಅವರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ಶನಿವಾರ ನಡೆಯಿತು.</p>.<p>ಕಳೆದ ಹದಿನೈದು ವರ್ಷಗಳಿಂದ ಗಡಿಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಕಳೆದ ಗುರುವಾರ ಮಣಿಪುರದ ಚಂದ್ರಪುರ ಜಿಲ್ಲೆಯಲ್ಲಿ ಯೋಧರನ್ನು ಗಡಿರಕ್ಷಣಾ ಕಾರ್ಯಕ್ಕೆ ಆಯಕಟ್ಟಿನ ಜಾಗಕ್ಕೆ ಬಿಟ್ಟುಬರಲು ಹೋಗಿದ್ದ ಸಂದರ್ಭದಲ್ಲಿ ಉಗ್ರಗಾಮಿಗಳ ಗುಂಡಿನ ದಾಳಿಗೆ ಸಿಲುಕಿ ಜೀವತೆತ್ತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>