ವಿಜಾಪುರ, ಜುಲೈ 12– ಕಳೆದ ಎರಡು ವಾರಗಳಿಂದ ಒಂದೇ ಸಮನೆ ಏರುತ್ತಿರುವ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದಾಗಿ ಉಲ್ಬಣಿಸಬಹುದಾದ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುವಂತೆ ವಾಯುಸೇನೆ ಮತ್ತು ಭೂಸೇನೆಗೆ ಸೂಚನೆ ನೀಡಲಾಗಿದೆ. ಆಲಮಟ್ಟಿ, ಬೀಳಗಿ, ಬಾಗಲಕೋಟೆಗಳಲ್ಲಿ ಹೆಲಿಪ್ಯಾಡ್ಗಳನ್ನು ಸಿದ್ಧಪಡಿಸಲಾಗಿದೆ.