ಭಾರತದ ಜತೆ ಚರ್ಚೆಗೆ ಪಾಕ್ ಷರತ್ತು
ಇಸ್ಲಾಮಾಬಾದ್, ಜ. 23 (ಪಿಟಿಐ)– ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಇನ್ನೊಂದು ಸುತ್ತಿನ ಮಾತುಕತೆಗೆ ಪಾಕಿಸ್ತಾನದ ವಿದೇಶಾಂಗ ಖಾತೆಯ ಸಚಿವ ಸರ್ದಾರ್ ಆಸೀಫ್ ಅಹ್ಮದ್ ಅಲಿ ಷರತ್ತು ವಿಧಿಸಿದ್ದಾರೆ. ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಭಾರತ ನಿಲ್ಲಿಸಬೇಕು. ಹಜರತ್ಬಾಲ್ ಸಮುಚ್ಚಯದಲ್ಲಿನ ಮುತ್ತಿಗೆಯನ್ನು ತೆಗೆದುಹಾಕಬೇಕು. ಬಂಧನದಲ್ಲಿರುವ ಎಲ್ಲ ಹುರಿಯತ್ ಕಾನ್ಫರೆನ್ಸ್ ನಾಯಕರನ್ನು ಬಿಡುಗಡೆ ಮಾಡಬೇಕು ಮತ್ತು ಪೊಲೀಸ್ ಕಸ್ಟಡಿಯಲ್ಲಿರುವ ವ್ಯಕ್ತಿ
ಗಳನ್ನು ‘ಕೊಲ್ಲುವುದನ್ನು’ ನಿಲ್ಲಿಸಬೇಕು– ಇವು ಈ ಷರತ್ತುಗಳಾಗಿವೆ.