ಅಹ್ಮದಾಬಾದ್, ಡಿ. 19 (ಯುಎನ್ಐ)– ಭಾರತೀಯ ಕಿಸಾನ್ ಸಂಘದ ಕರೆಯ ಮೇಲೆ ರಾಜ್ಯಾದ್ಯಂತ ನಡೆದಿರುವ ‘ಗ್ರಾಮ ಬಂದ್’ ಚಳವಳಿ ಇಂದು ಮೂರನೆಯ ದಿನಪ್ರವೇಶಿಸಿದೆ. ಈ ಮಧ್ಯೆ ರಾಜಕೋಟ ಜಿಲ್ಲೆಯ ಪರ್ದಿ ಗ್ರಾಮದಲ್ಲಿ ಉದ್ರಿಕ್ತ ರೈತರ ಗುಂಪನ್ನು ಚದುರಿಸಲು ಪೊಲೀಸರು ನಿನ್ನೆ ರಾತ್ರಿ ಗೋಲಿಬಾರ್ ಮಾಡಿದಾಗ ಒಬ್ಬ ಯುವಕ ಸತ್ತ.