ನವದೆಹಲಿ, ನವೆಂಬರ್ 20– ಜೈನ್ ಆಯೋಗದ ವರದಿಯನ್ನು ಸಂಸತ್ನಲ್ಲಿ ಮಂಡಿಸಿದ ಹಿನ್ನೆಲೆಯಲ್ಲಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ಸಂಚಿನಲ್ಲಿ ದೋಷಾರೋಪಕ್ಕೆ ಒಳಗಾಗಿರುವ ಡಿಎಂಕೆಯ ವಿರುದ್ಧ ಕ್ರಮದ ಮೊದಲ ಹೆಜ್ಜೆಯಾಗಿ ಆ ಪಕ್ಷದ ಸಚಿವರನ್ನು ತಕ್ಷಣವೇ ಕೈ ಬಿಡಬೇಕು, ಇಲ್ಲವಾದರೆ ಬೆಂಬಲ ಮುಂದುವರಿಸುವುದು ಕಷ್ಟ ಎಂದು ಪ್ರಧಾನಿಯವರಿಗೆ ಕಾಂಗ್ರೆಸ್ ಪಕ್ಷ ಇಂದು ರಾತ್ರಿ ಸ್ಪಷ್ಟಪಡಿಸಿದೆ.