ವಿವಾದ ಎಬ್ಬಿಸಿದ ಕಾವೇರಿ 4ನೇ ಹಂತದ ಗುತ್ತಿಗೆ
ಬೆಂಗಳೂರು, ಡಿ. 21– ನಗರಕ್ಕೆ ಕುಡಿಯುವ ನೀರು ಪೂರೈಸಲು ರೂಪಿಸಿರುವ ಸುಮಾರು 1,600 ಕೋಟಿ ರೂಪಾಯಿ ಅಂದಾಜು ವೆಚ್ಚದ ಕಾವೇರಿ ನಾಲ್ಕನೇ ಹಂತದ (ಎರಡನೇ ಘಟ್ಟ) ಯೋಜನೆಯ ಕಾಮಗಾರಿಗಳ ಗುತ್ತಿಗೆಯನ್ನು ಮಲೇಷ್ಯಾದ ಸಂಸ್ಥೆಯೊಂದಕ್ಕೆ ನೀಡಲು ಸರ್ಕಾರದ ಉನ್ನತ ಸ್ಥಾನಗಳಲ್ಲಿರುವ ಕೆಲವರು ತೋರಿಸುತ್ತಿದ್ದಾರೆ ಎನ್ನಲಾದ ‘ವಿಶೇಷ ಆಸಕ್ತಿ’ ನಾನಾ ರೀತಿಯ ಗುಮಾನಿಗಳಿಗೆ ಎಡೆ
ಮಾಡಿಕೊಟ್ಟಿದೆ.