ಕೊಯ್ದು ಮಾರುವ ಹಣ್ಣಿನಲ್ಲಿ ಸೋಂಕಿನ ಅಪಾಯ
ಬೆಂಗಳೂರು, ಏ. 8– ಏಪ್ರಿಲ್ ಬಂದಿದೆ; ತನ್ನೊಂದಿಗೆ ಎಂದಿನಂತೆ ಉರಿ ಬಿಸಿಲನ್ನು ಹೊತ್ತು ತಂದಿದೆ. ಜೊತೆಯಲ್ಲಿ ಹಲವು ಬಗೆಯ ಸಾಂಕ್ರಾಮಿಕ ರೋಗಗಳು ಕಾಣಿಸಿವೆ. ರೋಗ ಹರಡಲು ಕಾರಣವಾದ ಬೀದಿ ಬದಿಯ ಹಣ್ಣು ಮಾರಾಟವನ್ನು ನಿಯಂತ್ರಿಸಲಾಗಿದೆ ಎಂದು ಮಹಾನಗರ ಪಾಲಿಕೆ ಹೇಳಿದರೂ, ಮಾರಾಟ ಮಾತ್ರ ವ್ಯಾಪಕವಾಗಿ ನಡೆಯುತ್ತಿದೆ.