ಕಾರ್ಪೊರೇಷನ್ ಆಕ್ರಮಿಸಿದ ನಂದಗೋಕುಲ
ಬೆಂಗಳೂರು, ಏ. 3– ಸತತವಾದ ಕೂಗು, ನಗರ ನೈರ್ಮಲ್ಯದ ಹೊಣೆ ಹೊತ್ತ ಕಾರ್ಪೊರೇಷನ್ ಕಚೇರಿ ಆವರಣದಲ್ಲೇ ನಿರ್ಭೀತವಾಗಿ ಸಗಣಿ ಗಂಜಲ ಧಾರೆ. ನಗರವಾಸಕ್ಕೆ ತಲೆಗಂದಾಯ ಕೊಡಬೇಕೆಂಬ ಧೋರಣೆಯನ್ನು ಪ್ರತಿಭಟಿಸುವ ಸುಮಾರು 300ಕ್ಕೂ ಹೆಚ್ಚು ಸಂಖ್ಯೆಯ ದನ, ಎಮ್ಮೆ, ಕತ್ತೆ, ನಾಯಿಗಳೇ ಪ್ರದರ್ಶನಕಾರರು.