ನಾಲ್ಕನೆ ಯೋಜನೆಯಲ್ಲಿ ಪ್ರಾದೇಶಿಕ ಅಭಿವೃದ್ಧಿ ಬಗ್ಗೆ ತೀವ್ರ ಗಮನ: ಇಂದಿರಾ
ನವದೆಹಲಿ, ಮಾ. 15– ಎಲ್ಲ ಪ್ರದೇಶಗಳಲ್ಲೂ ಸಮತೋಲದ ಅಭಿವೃದ್ಧಿಯಾದಾಗ, ಧನಿಕರು, ದರಿದ್ರರ ನಡುವಣ ಅಂತರ ಕಡಿಮೆಯಾದಾಗ ರಾಷ್ಟ್ರ ಆರ್ಥಿಕ, ಸಾಮಾಜಿಕ, ರಾಜಕೀಯ ಸುಭದ್ರತೆ ಪಡೆಯಲು ಸಾಧ್ಯ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಇಲ್ಲಿ ತಿಳಿಸಿದರು.