ಮೈಸೂರು– ಮಹಾಷ್ಟ್ರ ಗಡಿ ವಿವಾದ: ಪಾಟಸ್ಕರ್ ಸೂತ್ರಕ್ಕೂ, ಪಿ.ಎಸ್.ಪಿ.ಗೂ ಸಂಬಂಧವಿಲ್ಲ– ದ್ವಿವೇದಿ
ಬೆಂಗಳೂರು, ಜೂನ್ 1– ‘ಮೈಸೂರು – ಮಹಾರಾಷ್ಟ್ರ ಗಡಿವಿವಾದ ಪರಿಹಾರಕ್ಕೆ ಪಾಟಸ್ಕರ್ ಅವರು ಸೂಚಿಸಿದ ಸೂತ್ರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ’ ಎಂದು ಲೋಕಸಭೆಯಲ್ಲಿ ಪಿ.ಎಸ್.ಪಿ. ಗುಂಪಿನ ನಾಯಕರಾಗಿರುವ ಶ್ರೀ ಎಸ್.ಎನ್. ದ್ವಿವೇದಿ ಅವರು ತಮ್ಮ ಪಕ್ಷದ ರಾಷ್ಟ್ರೀಯ ನಾಯಕತ್ವದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.