ನವದೆಹಲಿ, ಅ. 15– ‘ಸುಬದ್ಧ ಹಾಗೂ ಉದ್ದೇಶಸಾಧಕ’ ಸರ್ಕಾರ ರಚನೆಗಾಗಿ ಕೇಂದ್ರ ಸಮುದಾಯ ಅಭಿವೃದ್ಧಿ ಮತ್ತು ಸಹಕಾರ ಖಾತೆ ಸ್ಟೇಟ್ ಸಚಿವ ಶ್ರೀ ಎಂ.ಎಸ್. ಗುರುಪಾದಸ್ವಾಮಿ ಅವರೂ ಸೇರಿ ಇಬ್ಬರು ಸ್ಟೇಟ್ ಸಚಿವರು ಹಾಗೂ ಇಬ್ಬರು ಉಪಸಚಿವರನ್ನು ತಮ್ಮ ಸಚಿವ ಮಂಡಲಿಯಿಂದ ತೆಗೆದುಹಾಕಲು ಪ್ರಧಾನಿ ಇಂದಿರಾ ಗಾಂಧಿ ಅವರು ನಿರ್ಧರಿಸಿದ್ದಾರೆಂದು ಗೊತ್ತಾಗಿದೆ.