<p>ರಾಜ್ಯ ಸಂಪುಟದ ನಿರ್ಧಾರ: ಸರ್ಕಾರ–ನೌಕರರಲ್ಲಿ ಸಮಾಲೋಚನೆಗಾಗಿ ಜಂಟಿ ಸಮಿತಿ ರಚನೆ</p>.<p>ಬೆಂಗಳೂರು, ಅ. 7– ಪರಸ್ಪರ ವಿಚಾರ ವಿನಿಮಯ ನಡೆಯಬೇಕೆಂಬ ಉದ್ದೇಶದಿಂದ ಸರ್ಕಾರದ ಹಾಗೂ ನೌಕರರ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಾಲೋಚನಾ ಸಮಿತಿಯೊಂದನ್ನು ರಚಿಸಲು ಇಂದು<br />ನಡೆದ ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.</p>.<p>ಈ ಸಮಾಲೋಚನಾ ಸಮಿತಿಯು ಸಲಹಾ ಮಂಡಳಿಯಾಗಿರುವುದೆಂದು,ಮಂತ್ರಿಮಂಡಲದ ನಿರ್ಧಾರವನ್ನು ವರದಿಗಾರರಿಗೆ ತಿಳಿಸಿದ ಮುಖ್ಯಮಂತ್ರಿಡಿ. ದೇವರಾಜ ಅರಸು ಅವರು ವಿವರಿಸಿದರು.</p>.<p>ನೌಕರರ ಕುಂದುಕೊರತೆಗಳು ಹಾಗೂ ಸರ್ಕಾರಿ ಸೇವೆಗೆ ಸಂಬಂಧಿಸಿದ ವಿಷಯಗಳನ್ನು ಈ ಸಮಿತಿ ಚರ್ಚಿಸುವುದು.</p>.<p>ಮೈಸೂರು, ಧಾರವಾಡ ಜಿಲ್ಲೆಗೂ ಕೈಗಾರಿಕೆ ಸ್ಥಾಪನೆಗೆ ಕೇಂದ್ರದ ಸಹಾಯಧನ ಕ್ರಮ ವಿಸ್ತರಣೆ</p>.<p>ಬೆಂಗಳೂರು, ಅ. 7– ರಾಯಚೂರು ಜಿಲ್ಲೆಯೇ ಅಲ್ಲದೆ ಮೈಸೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ಯಮಗಳಿಗೆ ಅವರ ಬಂಡವಾಳದಶೇ 10ರಷ್ಟು ಕೇಂದ್ರದಿಂದ ಸಹಾಯಧನವಾಗಿ ದೊರೆಯಲಿದೆ.</p>.<p>ಕೇಂದ್ರದ ಸಹಾಯಧನವನ್ನು ಇನ್ನೂ ಎರಡು ಜಿಲ್ಲೆಗಳಿಗೆ ಅನ್ವಯಿಸಲು ಯೋಜನಾ ಆಯೋಗ ಒಪ್ಪಿರುವುದನ್ನು ಕೈಗಾರಿಕೆ ಸಚಿವ ಶ್ರೀ ಎಸ್.ಎಂ. ಕೃಷ್ಣ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ ಸಂಪುಟದ ನಿರ್ಧಾರ: ಸರ್ಕಾರ–ನೌಕರರಲ್ಲಿ ಸಮಾಲೋಚನೆಗಾಗಿ ಜಂಟಿ ಸಮಿತಿ ರಚನೆ</p>.<p>ಬೆಂಗಳೂರು, ಅ. 7– ಪರಸ್ಪರ ವಿಚಾರ ವಿನಿಮಯ ನಡೆಯಬೇಕೆಂಬ ಉದ್ದೇಶದಿಂದ ಸರ್ಕಾರದ ಹಾಗೂ ನೌಕರರ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಾಲೋಚನಾ ಸಮಿತಿಯೊಂದನ್ನು ರಚಿಸಲು ಇಂದು<br />ನಡೆದ ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.</p>.<p>ಈ ಸಮಾಲೋಚನಾ ಸಮಿತಿಯು ಸಲಹಾ ಮಂಡಳಿಯಾಗಿರುವುದೆಂದು,ಮಂತ್ರಿಮಂಡಲದ ನಿರ್ಧಾರವನ್ನು ವರದಿಗಾರರಿಗೆ ತಿಳಿಸಿದ ಮುಖ್ಯಮಂತ್ರಿಡಿ. ದೇವರಾಜ ಅರಸು ಅವರು ವಿವರಿಸಿದರು.</p>.<p>ನೌಕರರ ಕುಂದುಕೊರತೆಗಳು ಹಾಗೂ ಸರ್ಕಾರಿ ಸೇವೆಗೆ ಸಂಬಂಧಿಸಿದ ವಿಷಯಗಳನ್ನು ಈ ಸಮಿತಿ ಚರ್ಚಿಸುವುದು.</p>.<p>ಮೈಸೂರು, ಧಾರವಾಡ ಜಿಲ್ಲೆಗೂ ಕೈಗಾರಿಕೆ ಸ್ಥಾಪನೆಗೆ ಕೇಂದ್ರದ ಸಹಾಯಧನ ಕ್ರಮ ವಿಸ್ತರಣೆ</p>.<p>ಬೆಂಗಳೂರು, ಅ. 7– ರಾಯಚೂರು ಜಿಲ್ಲೆಯೇ ಅಲ್ಲದೆ ಮೈಸೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ಯಮಗಳಿಗೆ ಅವರ ಬಂಡವಾಳದಶೇ 10ರಷ್ಟು ಕೇಂದ್ರದಿಂದ ಸಹಾಯಧನವಾಗಿ ದೊರೆಯಲಿದೆ.</p>.<p>ಕೇಂದ್ರದ ಸಹಾಯಧನವನ್ನು ಇನ್ನೂ ಎರಡು ಜಿಲ್ಲೆಗಳಿಗೆ ಅನ್ವಯಿಸಲು ಯೋಜನಾ ಆಯೋಗ ಒಪ್ಪಿರುವುದನ್ನು ಕೈಗಾರಿಕೆ ಸಚಿವ ಶ್ರೀ ಎಸ್.ಎಂ. ಕೃಷ್ಣ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>