<p><strong>ವ್ಯಾಧಿಗೆ ಭ್ರೂಣದ ಘಟ್ಟದಲ್ಲೇ ಶಸ್ತ್ರಚಿಕಿತ್ಸೆ</strong></p>.<p>ನ್ಯೂಪೋರ್ಟ್ಬೀಚ್, ಕ್ಯಾಲಿಫೋರ್ನಿಯಾ, ಜೂನ್ 23– ತಾಯಿಯ ಗರ್ಭದಲ್ಲಿರುವ <br>ಭ್ರೂಣದ ಐದನೇ ತಿಂಗಳ ಬೆಳವಣಿಗೆಯನ್ನು ವೈದ್ಯರು ಪರೀಕ್ಷಿಸಿ, ಭ್ರೂಣದಲ್ಲಿರುವ ರೋಗ, ದೋಷಗಳನ್ನು ಪತ್ತೆ ಹಚ್ಚಿ, ಮಗು ಹುಟ್ಟುವುದಕ್ಕೆ ಮೊದಲೇ ಶಸ್ತ್ರಚಿಕಿತ್ಸೆ ಮೂಲಕ ಈ ರೋಗಗಳನ್ನು ವಾಸಿ ಮಾಡುವರು!</p>.<p>ಇದು ಹಾಲಿವುಡ್ನ ಕಾಲ್ಪನಿಕ ವಿಜ್ಞಾನ ಕಾದಂಬರಿಕಾರನ ಊಹಾಪೋಹದಂತೆ ಕಾಣಿಸಬಹುದು. ಆದರೆ ಟಾರನ್ಸ್ನಲ್ಲಿರುವ ಹಾರ್ಬರ್ ಜನರಲ್ ಆಸ್ಪತ್ರೆಯಲ್ಲಿನ ವೈದ್ಯಕೀಯ ಚಲನಶಾಸ್ತ್ರ ವಿಭಾಗದ ಅಸೋಸಿಯೇಟ್ ಚೀಫ್ ಆಗಿರುವ ಡಾ. ಮೈಕೇಲ್ಕಾಬ್ಯಾಕ್ ಅವರ ಪ್ರಕಾರ, ಇದು ಸಾಧ್ಯವಾಗುವಂತೆ ಮಾಡುವ ಸಂಶೋಧನಾ ಕಾರ್ಯ ಈಗ ನಡೆಯುತ್ತಿದೆ.</p>.<p><strong>ರಾಜ್ಯ ಮೆಡಿಕಲ್ ಕಾಲೇಜುಗಳ ಖುದ್ದು ಪರಿಶೀಲನೆಗೆ ತಜ್ಞರ ತಂಡ</strong></p>.<p>ಬೆಂಗಳೂರು, ಜೂನ್ 23– ಕರ್ನಾಟಕ ಮತ್ತು ಆಂಧ್ರದಲ್ಲಿ ಹಲವು ಮೆಡಿಕಲ್ ಕಾಲೇಜುಗಳ ಮಾನ್ಯತೆ ರದ್ದುಪಡಿಸಬೇಕೆಂದು ಇಂಡಿಯನ್ ಮೆಡಿಕಲ್ ಕೌನ್ಸಿಲ್ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿಲ್ಲ.</p>.<p>ಸಂಬಂಧಿಸಿದ ಕಾಲೇಜುಗಳಲ್ಲಿ ಇರುವ ಸೌಲಭ್ಯಗಳನ್ನು ಪರಿಶೀಲನೆ ಮಾಡಲು ಎರಡು ರಾಜ್ಯಗಳಿಗೂ ಪ್ರತ್ಯೇಕ ತಜ್ಞರ ತಂಡ ರಚಿಸಲಾಗಿದೆ. ತಂಡಗಳು ಒಂದು ವಾರದಲ್ಲಿ ಕರ್ನಾಟಕ ಮತ್ತು ಆಂಧ್ರದ ಕಾಲೇಜುಗಳಿಗೆ ಭೇಟಿ ನೀಡಿ ಬೇಗನೆ ವರದಿ ಸಲ್ಲಿಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವ್ಯಾಧಿಗೆ ಭ್ರೂಣದ ಘಟ್ಟದಲ್ಲೇ ಶಸ್ತ್ರಚಿಕಿತ್ಸೆ</strong></p>.<p>ನ್ಯೂಪೋರ್ಟ್ಬೀಚ್, ಕ್ಯಾಲಿಫೋರ್ನಿಯಾ, ಜೂನ್ 23– ತಾಯಿಯ ಗರ್ಭದಲ್ಲಿರುವ <br>ಭ್ರೂಣದ ಐದನೇ ತಿಂಗಳ ಬೆಳವಣಿಗೆಯನ್ನು ವೈದ್ಯರು ಪರೀಕ್ಷಿಸಿ, ಭ್ರೂಣದಲ್ಲಿರುವ ರೋಗ, ದೋಷಗಳನ್ನು ಪತ್ತೆ ಹಚ್ಚಿ, ಮಗು ಹುಟ್ಟುವುದಕ್ಕೆ ಮೊದಲೇ ಶಸ್ತ್ರಚಿಕಿತ್ಸೆ ಮೂಲಕ ಈ ರೋಗಗಳನ್ನು ವಾಸಿ ಮಾಡುವರು!</p>.<p>ಇದು ಹಾಲಿವುಡ್ನ ಕಾಲ್ಪನಿಕ ವಿಜ್ಞಾನ ಕಾದಂಬರಿಕಾರನ ಊಹಾಪೋಹದಂತೆ ಕಾಣಿಸಬಹುದು. ಆದರೆ ಟಾರನ್ಸ್ನಲ್ಲಿರುವ ಹಾರ್ಬರ್ ಜನರಲ್ ಆಸ್ಪತ್ರೆಯಲ್ಲಿನ ವೈದ್ಯಕೀಯ ಚಲನಶಾಸ್ತ್ರ ವಿಭಾಗದ ಅಸೋಸಿಯೇಟ್ ಚೀಫ್ ಆಗಿರುವ ಡಾ. ಮೈಕೇಲ್ಕಾಬ್ಯಾಕ್ ಅವರ ಪ್ರಕಾರ, ಇದು ಸಾಧ್ಯವಾಗುವಂತೆ ಮಾಡುವ ಸಂಶೋಧನಾ ಕಾರ್ಯ ಈಗ ನಡೆಯುತ್ತಿದೆ.</p>.<p><strong>ರಾಜ್ಯ ಮೆಡಿಕಲ್ ಕಾಲೇಜುಗಳ ಖುದ್ದು ಪರಿಶೀಲನೆಗೆ ತಜ್ಞರ ತಂಡ</strong></p>.<p>ಬೆಂಗಳೂರು, ಜೂನ್ 23– ಕರ್ನಾಟಕ ಮತ್ತು ಆಂಧ್ರದಲ್ಲಿ ಹಲವು ಮೆಡಿಕಲ್ ಕಾಲೇಜುಗಳ ಮಾನ್ಯತೆ ರದ್ದುಪಡಿಸಬೇಕೆಂದು ಇಂಡಿಯನ್ ಮೆಡಿಕಲ್ ಕೌನ್ಸಿಲ್ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿಲ್ಲ.</p>.<p>ಸಂಬಂಧಿಸಿದ ಕಾಲೇಜುಗಳಲ್ಲಿ ಇರುವ ಸೌಲಭ್ಯಗಳನ್ನು ಪರಿಶೀಲನೆ ಮಾಡಲು ಎರಡು ರಾಜ್ಯಗಳಿಗೂ ಪ್ರತ್ಯೇಕ ತಜ್ಞರ ತಂಡ ರಚಿಸಲಾಗಿದೆ. ತಂಡಗಳು ಒಂದು ವಾರದಲ್ಲಿ ಕರ್ನಾಟಕ ಮತ್ತು ಆಂಧ್ರದ ಕಾಲೇಜುಗಳಿಗೆ ಭೇಟಿ ನೀಡಿ ಬೇಗನೆ ವರದಿ ಸಲ್ಲಿಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>