ಸೋಮವಾರ ಸಂಜೆ ವೇಳೆಗೆ ಸರ್ಕಾರ ರಚನೆ ಬಗೆಗೆ ಹೈಕಮಾಂಡ್ ಆದೇಶ
ಬೆಂಗಳೂರು, ಮಾ. 20– ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವ ಹೊಣೆಯನ್ನು ಒಪ್ಪಿಕೊಳ್ಳಬೇಕೆ ಬೇಡವೆ ಎಂಬ ಬಗ್ಗೆ ಹೈಕಮಾಂಡಿನ ಆದೇಶವನ್ನು ಮುಂದಿನ ಸೋಮವಾರ ಸಂಜೆಯ ಹೊತ್ತಿಗೆ ನಿರೀಕ್ಷಿಸಲಾಗಿದೆ.
ಸರ್ಕಾರ ರಚಿಸಿ, ಆನಂತರ ವಿಧಾನಸಭೆಯನ್ನು ವಿಸರ್ಜಿಸಬೇಕೆಂಬ ಅಭಿಪ್ರಾಯವನ್ನು ಆಡಳಿತ ಕಾಂಗ್ರೆಸ್ ಪಕ್ಷದ ಬಹುಮಂದಿ ಶಾಸಕರು ಹೈಕಮಾಂಡಿನ ಪ್ರತಿನಿಧಿ ಉಮಾಶಂಕರ ದೀಕ್ಷಿತ್ ಅವರಿಗೆ ತಿಳಿಸಿದ್ದಾರೆ.
23ರಿಂದ ಇಂಡಿಯನ್ ಏರ್ಲೈನ್ಸ್ ಕೆಲವು ವಿಮಾನ ಸಂಚಾರ ಆರಂಭ
ಕಲ್ಕತ್ತ, ಮಾ.20– ಒಂದು ವಾರದಿಂದ ಲಾಕ್ಔಟ್ ಘೋಷಿಸಿರುವ ಇಂಡಿಯನ್ ಏರ್ಲೈನ್ಸ್ ಸಂಸ್ಥೆಯು ಮಂಗಳವಾರದಿಂದ ಕೆಲವು ಮಾರ್ಗಗಳಲ್ಲಿ ಕೆಲವು ವಿಮಾನ ಹಾರಾಟವನ್ನು ಅಧಿಕೃತವಾಗಿ ಪ್ರಕಟಿಸಿತು.
ಈ ಪೈಕಿ ದೆಹಲಿ ಮುಂಬೈ ನಡುವೆ ಒಂದು ಬೋಯಿಂಗ್, ದೆಹಲಿ ಮದ್ರಾಸ್ ಮಧ್ಯೆ ಮತ್ತೊಂದು ಬೋಯಿಂಗ್ ಹಾಗೂ ಮದ್ರಾಸ್– ಹೈದರಾಬಾದ್ಗಳ ಮಧ್ಯೆ ‘ಎಚ್.ಎಸ್.748’ ವಿಮಾನದ ಹಾರಾಟ ಮುಖ್ಯ.