<p><strong>ನವದೆಹಲಿ, ಜೂನ್ 16–</strong> ದೆಹಲಿಯ ಟೆಲಿಫೋನ್ ಸಲಹಾ ಸಮಿತಿ ಪುನರ್ರಚನೆಗೆ ಇನ್ನು ಎರಡು ವಾರ ಇದೆ. ಆ ಸಮಿತಿಯಲ್ಲಿ ಒಂದು ಜಾಗ ಗಿಟ್ಟಿಸಿಕೊಳ್ಳಲು ಈ ಬಾರಿ ಬಹಳ ನೂಕುನುಗ್ಗಲು. ಅದಕ್ಕೆ ನಾಮಕರಣ ಮಾಡುವ ಸಂಪರ್ಕಖಾತೆ ಮೇಲೆ ಆಸಕ್ತ ಜನರಿಂದ ಹಿಂದೆ ಎಂದು ಇಲ್ಲದಷ್ಟು ಒತ್ತಡ.</p><p>ಇಂಥವರನ್ನು ನಾಮಕರಣ ಮಾಡಿ; ಇವರು ಯೋಗ್ಯರು ಎಂದು ಶಿಫಾರಸು ಪತ್ರ ಹಾಗೂ ತಂತಿ ಸಂದೇಶಗಳ ಸುರಿಮಳೆಯೇ ಈಗ ಆಗಿದೆ. ಭೂಪನೊಬ್ಬ 40ಕ್ಕಿಂತ ಹೆಚ್ಚು ಜನ ಸಂಸತ್ ಸದಸ್ಯರಿಂದ ಶಿಫಾರಸು ಪತ್ರಗಳನ್ನು ಜಮಾಯಿಸಿ ಸಾದರ ಪಡಿಸಿದ್ದಾರೆ!</p><p>ಈಗ ಸಮಿತಿ ಸದಸ್ಯ ಸಂಖ್ಯೆ 43. ಅದನ್ನು 20 ಅಥವಾ 22ಕ್ಕೆ ಈ ಬಾರಿ ಇಳಿಸುತ್ತಾರೆ ಎನ್ನುವ ವದಂತಿಯೇ ಇಷ್ಟೊಂದು ಪೈಪೋಟಿಗೆ ಕಾರಣ.</p><p><strong>ಪ್ರಾಮಾಣಿಕ ಬೇಕೆ?: ಹುಡುಕಿ ಫಲವಿಲ್ಲ</strong></p><p><strong>ಕಲ್ಕತ್ತ, ಜೂನ್ 16–</strong> ‘ಲಂಚ ರುಷುವತ್ತು ದೇಶದ ತುಂಬೆಲ್ಲಾ ಎಷ್ಟು ತುಂಬಿಕೊಂಡಿದೆ ಎಂದರೆ, ಲಂಚಗುಳಿ ಅಲ್ಲದವನು ಎಲ್ಲಾದರೂ ಸಿಗಬಹುದೇ ಎಂದು ಟಾರ್ಚ್ ಹಿಡಿದುಕೊಂಡು ಹುಡುಕಾಡಬೇಕು’ ಸಂಸತ್ತಿನಲ್ಲಿ ಸಂಸ್ಥಾ ಕಾಂಗ್ರೆಸ್ ಗುಂಪಿನ ನಾಯಕ ಎಸ್.ಎನ್. ಮಿಶ್ರ ಅವರು ಸಂಸ್ಥಾ ಎ.ಐ.ಸಿ.ಸಿ. ಅಧಿವೇಶನದಲ್ಲಿ ಇಂದು ಈ ಚಿತ್ರ ನೀಡಿದರು.</p><p>‘ಅವಿಭಜಿತ ಕಾಂಗ್ರೆಸ್ ಇದ್ದ ಕಾಲದಲ್ಲಿ ಈಗ ಇರುವುದರ ತದ್ವಿರುದ್ಧ ಪರಿಸ್ಥಿತಿ ಇತ್ತು. ಆಗ ಲಂಚಗುಳಿಯನ್ನು ಹುಡುಕಬೇಕಾದರೆ ತನಿಖೆ ಎಂಬ ಹಲವು ಸೆಲ್ಗಳನ್ನು ತುಂಬಿದ ಟಾರ್ಚ್ ಹೊತ್ತಿಸಿಕೊಂಡು ಹುಡುಕ<br>ಬೇಕಾಗಿತ್ತು’ ಎಂದು ಮಿಶ್ರ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಜೂನ್ 16–</strong> ದೆಹಲಿಯ ಟೆಲಿಫೋನ್ ಸಲಹಾ ಸಮಿತಿ ಪುನರ್ರಚನೆಗೆ ಇನ್ನು ಎರಡು ವಾರ ಇದೆ. ಆ ಸಮಿತಿಯಲ್ಲಿ ಒಂದು ಜಾಗ ಗಿಟ್ಟಿಸಿಕೊಳ್ಳಲು ಈ ಬಾರಿ ಬಹಳ ನೂಕುನುಗ್ಗಲು. ಅದಕ್ಕೆ ನಾಮಕರಣ ಮಾಡುವ ಸಂಪರ್ಕಖಾತೆ ಮೇಲೆ ಆಸಕ್ತ ಜನರಿಂದ ಹಿಂದೆ ಎಂದು ಇಲ್ಲದಷ್ಟು ಒತ್ತಡ.</p><p>ಇಂಥವರನ್ನು ನಾಮಕರಣ ಮಾಡಿ; ಇವರು ಯೋಗ್ಯರು ಎಂದು ಶಿಫಾರಸು ಪತ್ರ ಹಾಗೂ ತಂತಿ ಸಂದೇಶಗಳ ಸುರಿಮಳೆಯೇ ಈಗ ಆಗಿದೆ. ಭೂಪನೊಬ್ಬ 40ಕ್ಕಿಂತ ಹೆಚ್ಚು ಜನ ಸಂಸತ್ ಸದಸ್ಯರಿಂದ ಶಿಫಾರಸು ಪತ್ರಗಳನ್ನು ಜಮಾಯಿಸಿ ಸಾದರ ಪಡಿಸಿದ್ದಾರೆ!</p><p>ಈಗ ಸಮಿತಿ ಸದಸ್ಯ ಸಂಖ್ಯೆ 43. ಅದನ್ನು 20 ಅಥವಾ 22ಕ್ಕೆ ಈ ಬಾರಿ ಇಳಿಸುತ್ತಾರೆ ಎನ್ನುವ ವದಂತಿಯೇ ಇಷ್ಟೊಂದು ಪೈಪೋಟಿಗೆ ಕಾರಣ.</p><p><strong>ಪ್ರಾಮಾಣಿಕ ಬೇಕೆ?: ಹುಡುಕಿ ಫಲವಿಲ್ಲ</strong></p><p><strong>ಕಲ್ಕತ್ತ, ಜೂನ್ 16–</strong> ‘ಲಂಚ ರುಷುವತ್ತು ದೇಶದ ತುಂಬೆಲ್ಲಾ ಎಷ್ಟು ತುಂಬಿಕೊಂಡಿದೆ ಎಂದರೆ, ಲಂಚಗುಳಿ ಅಲ್ಲದವನು ಎಲ್ಲಾದರೂ ಸಿಗಬಹುದೇ ಎಂದು ಟಾರ್ಚ್ ಹಿಡಿದುಕೊಂಡು ಹುಡುಕಾಡಬೇಕು’ ಸಂಸತ್ತಿನಲ್ಲಿ ಸಂಸ್ಥಾ ಕಾಂಗ್ರೆಸ್ ಗುಂಪಿನ ನಾಯಕ ಎಸ್.ಎನ್. ಮಿಶ್ರ ಅವರು ಸಂಸ್ಥಾ ಎ.ಐ.ಸಿ.ಸಿ. ಅಧಿವೇಶನದಲ್ಲಿ ಇಂದು ಈ ಚಿತ್ರ ನೀಡಿದರು.</p><p>‘ಅವಿಭಜಿತ ಕಾಂಗ್ರೆಸ್ ಇದ್ದ ಕಾಲದಲ್ಲಿ ಈಗ ಇರುವುದರ ತದ್ವಿರುದ್ಧ ಪರಿಸ್ಥಿತಿ ಇತ್ತು. ಆಗ ಲಂಚಗುಳಿಯನ್ನು ಹುಡುಕಬೇಕಾದರೆ ತನಿಖೆ ಎಂಬ ಹಲವು ಸೆಲ್ಗಳನ್ನು ತುಂಬಿದ ಟಾರ್ಚ್ ಹೊತ್ತಿಸಿಕೊಂಡು ಹುಡುಕ<br>ಬೇಕಾಗಿತ್ತು’ ಎಂದು ಮಿಶ್ರ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>