ನವದೆಹಲಿ, ಆ. 30– ಮುಂದಿನ ಕೆಲವು ದಿನಗಳಲ್ಲಿ 10 ಸಾವಿರ ಟ್ರಾಕ್ಟರುಗಳನ್ನು ಆಮದು ಮಾಡಿಕೊಳ್ಳಲಾಗುವುದೆಂದು ಕೃಷಿ ಮತ್ತು ಆಹಾರ ಶಾಖೆ ಸ್ಟೇಟ್ ಸಚಿವ ಎ.ಪಿ. ಶಿಂಧೆಯ ವರು ಇಂದು ರಾಜ್ಯ ಸಭೆಯಲ್ಲಿ ತಿಳಿಸಿದರು.
‘ಸಾಹಸಿ’ ಜೆಕ್ ಜನತೆಗೆ ಲೋಕಸಭೆ ಬೆಂಬಲ
ನವದೆಹಲಿ, ಆ. 30– ತಮ್ಮ ರಾಷ್ಟ್ರದ ರಾಜಕೀಯ ಜೀವನದಲ್ಲಿ ಉದಾರ ನೀತಿ, ಪ್ರಜಾಸತ್ತೆ ಅನ್ವಯಗೊಳಿಸುವ ಜೆಕೊಸ್ಲೊವಾಕಿಯದ ‘ಸಾಹಸಿ ಜನತೆ’ಯ ಆಂದೋಲನಕ್ಕೆ ಬೆಂಬಲ, ಸಹಾನುಭೂತಿ ವ್ಯಕ್ತಪಡಿಸುವ ಖಾಸಗಿ ನಿರ್ಣಯವನ್ನು ಇಂದು ಲೋಕಸಭೆ ಅತ್ಯಧಿಕ ಬಹುಮತದಿಂದ ಆಂಗೀಕರಿಸಿತು.
ಮದ್ರಾಸ್ ರಾಜ್ಯದ ಹೆಸರು ಬದಲಾವಣೆಗೆ ಮಸೂದೆ ಮಂಡನೆ
ನವದೆಹಲಿ, ಆ. 31– ಮದ್ರಾಸ್ ರಾಜ್ಯದ ಹೆಸರನ್ನು ತಮಿಳುನಾಡು ಎಂದು ಬದಲಾಯಿಸಲು ಉದ್ದೇಶಿಸಲಾಗಿರುವ ಮಸೂದೆಯನ್ನು ಗೃಹಸಚಿವ ಚವಾಣರು ಲೋಕಸಭೆಯಲ್ಲಿ ಇಂದು ಮಂಡಿಸಿದರು.