<p><strong>ಮದರಾಸಿನ ದ್ವಿಭಾಷಾ ನೀತಿ, ದೇಶ ಒಡೆವ ರೀತಿ: ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ ಅವರ ಪ್ರತಿಕ್ರಿಯೆ</strong></p>.<p><strong>ಬೆಂಗಳೂರು, ಜ. 30</strong> – ಮದರಾಸ್ ಸರಕಾರದ ‘ದ್ವಿಭಾಷಾ ಸೂತ್ರ’ವನ್ನು ತಾವು ಒಪ್ಪುವುದಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯೂ ಆದ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿ ಇದು ದೇಶವನ್ನು ಒಡೆಯುವ ರೀತಿ ಎಂದು ಟೀಕಿಸಿದರು.</p>.<p>ದೇಶ ಒಡೆಯುವ ಇದು ನಡೆಯಬಾರದು ಜನ ಇದಕ್ಕೆ ತುತ್ತಾಗಬಾರದು ಎಂದು ಎಚ್ಚರಿಸಿ ದೇಶದ ಏಕತೆಯೇ ಉನ್ನತ ಆದರ್ಶವಾಗಬೇಕು ಎಂದರು.</p>.<p><strong>ಮುಖ್ಯಮಂತ್ರಿ ಮೇಲೆ ಅಧಿಕಾರ ದುರುಪಯೋಗ ಆರೋಪ</strong></p>.<p><strong>ಬೆಂಗಳೂರು, ಜ. 30</strong>– ಕಾಂಗ್ರೆಸ್ ಅಧ್ಯಕ್ಷರೂ ರಾಜ್ಯದ ಮುಖ್ಯಮಂತ್ರಿಗಳೂ ಒಬ್ಬರೇ ಆಗಿ ಶ್ರೀ ಎಸ್. ನಿಜಲಿಂಗಪ್ಪನವರು ಸಾರ್ವಜನಿಕ ನಿಧಿಯನ್ನು ಪಕ್ಷದ ಹಿತಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ವಿರೋಧಪಕ್ಷದ ನಾಯಕ ಶ್ರೀ ಎಸ್. ಶಿವಪ್ಪನವರು ಇಂದು ಇಲ್ಲಿ ಆಪಾದಿಸಿದರು.</p>.<p><strong>ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಎಂ.ವಿ. ರಾಮರಾವ್</strong></p>.<p><strong>ನವದೆಹಲಿ, ಜ. 30</strong>– ಮೈಸೂರು ಗೃಹಮಂತ್ರಿ ಶ್ರೀ ಎಂ.ವಿ. ರಾಮರಾವ್ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದಾಗಿ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಿದರು.</p>.<p><strong>ಸೂಯೆಜ್ ಬಳಿ ಈಜಿಪ್ಟ್–ಇಸ್ರೇಲ್ ಉಗ್ರ ಕಾಳಗ</strong></p>.<p><strong>ಟೆಲ್ ಆವೀವ್, ಜ. 30</strong>– ಸೂಯೆಜ್ ಕಾಲುವೆಯ 45 ಮೈಲಿಯುದ್ದಕ್ಕೂ ಇಸ್ರೇಲ್ ಮತ್ತು ಈಜಿಪ್ಟ್ ಪಡೆಗಳ ನಡುವೆ ಉಗ್ರ ಕಾಳಗ ನಡೆಯಿತು.</p>.<p><strong>ಬೆಂಗಳೂರು ವಾರ್ಸಿಟಿ ಕಾಲೇಜು ಅನಿರ್ದಿಷ್ಟ ಕಾಲ ಬಂದ್</strong></p>.<p><strong>ಬೆಂಗಳೂರು, ಜ. 30– </strong>ಬೆಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಕಾಲೇಜುಗಳನ್ನೂ ನಾಳೆಯಿಂದ ಅನಿರ್ದಿಷ್ಟ ಕಾಲದವರೆಗೆ ಮುಚ್ಚಲಾಗುವುದೆಂದು ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್ ಶ್ರೀ ಪಿ. ಮಲ್ಲಿಕಾರ್ಜುನಪ್ಪನವರು ಇಂದು ರಾತ್ರಿ ತಿಳಿಸಿದರು.</p>.<p><strong>ಕೇಂದ್ರದ ಕ್ರಮ ಕಾದು ನೋಡಿ; ಮುಖ್ಯಮಂತ್ರಿ ಸಲಹೆ</strong></p>.<p><strong>ಬೆಂಗಳೂರು, ಜ. 30</strong>– ‘ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ತೀರ್ಮಾನವನ್ನು ಕೇಂದ್ರ ಸರಕಾರ ಹೇಗೆ ಕಾರ್ಯಗತ ಮಡುವುದೆಂಬುದನ್ನು ಕಾದುನೋಡಿ’ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ, ಶ್ರೀ ಎಸ್. ನಿಜಲಿಂಗಪ್ಪನವರು ಇಂದು ನೀಡಿದ ಹಿತೋಕ್ತಿ.</p>.<p>ಮೈಸೂರು ರಾಜ್ಯವೂ ಮದರಾಸಿನಂತೆ ದ್ವಿಭಾಷಾ ಸೂತ್ರವನ್ನು ಅನುಸರಿಸಬೇಕೆಂದು ನಗರದಲ್ಲಿ ವಿದ್ಯಾರ್ಥಿಗಳು ಒತ್ತಾಯಪಡಿಸುತ್ತಿದ್ದಾರೆಂಬ ಅಂಶ<br /> ವನ್ನು ಬರದಿಗಾರರು ಇಂದು ನಗರಕ್ಕೆ ಹಿಂತಿರುಗಿದ ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ ಮುಖ್ಯಮಂತ್ರಿಯವರು ಮೇಲಿನಂತೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದರಾಸಿನ ದ್ವಿಭಾಷಾ ನೀತಿ, ದೇಶ ಒಡೆವ ರೀತಿ: ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ ಅವರ ಪ್ರತಿಕ್ರಿಯೆ</strong></p>.<p><strong>ಬೆಂಗಳೂರು, ಜ. 30</strong> – ಮದರಾಸ್ ಸರಕಾರದ ‘ದ್ವಿಭಾಷಾ ಸೂತ್ರ’ವನ್ನು ತಾವು ಒಪ್ಪುವುದಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯೂ ಆದ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿ ಇದು ದೇಶವನ್ನು ಒಡೆಯುವ ರೀತಿ ಎಂದು ಟೀಕಿಸಿದರು.</p>.<p>ದೇಶ ಒಡೆಯುವ ಇದು ನಡೆಯಬಾರದು ಜನ ಇದಕ್ಕೆ ತುತ್ತಾಗಬಾರದು ಎಂದು ಎಚ್ಚರಿಸಿ ದೇಶದ ಏಕತೆಯೇ ಉನ್ನತ ಆದರ್ಶವಾಗಬೇಕು ಎಂದರು.</p>.<p><strong>ಮುಖ್ಯಮಂತ್ರಿ ಮೇಲೆ ಅಧಿಕಾರ ದುರುಪಯೋಗ ಆರೋಪ</strong></p>.<p><strong>ಬೆಂಗಳೂರು, ಜ. 30</strong>– ಕಾಂಗ್ರೆಸ್ ಅಧ್ಯಕ್ಷರೂ ರಾಜ್ಯದ ಮುಖ್ಯಮಂತ್ರಿಗಳೂ ಒಬ್ಬರೇ ಆಗಿ ಶ್ರೀ ಎಸ್. ನಿಜಲಿಂಗಪ್ಪನವರು ಸಾರ್ವಜನಿಕ ನಿಧಿಯನ್ನು ಪಕ್ಷದ ಹಿತಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ವಿರೋಧಪಕ್ಷದ ನಾಯಕ ಶ್ರೀ ಎಸ್. ಶಿವಪ್ಪನವರು ಇಂದು ಇಲ್ಲಿ ಆಪಾದಿಸಿದರು.</p>.<p><strong>ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಎಂ.ವಿ. ರಾಮರಾವ್</strong></p>.<p><strong>ನವದೆಹಲಿ, ಜ. 30</strong>– ಮೈಸೂರು ಗೃಹಮಂತ್ರಿ ಶ್ರೀ ಎಂ.ವಿ. ರಾಮರಾವ್ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದಾಗಿ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಿದರು.</p>.<p><strong>ಸೂಯೆಜ್ ಬಳಿ ಈಜಿಪ್ಟ್–ಇಸ್ರೇಲ್ ಉಗ್ರ ಕಾಳಗ</strong></p>.<p><strong>ಟೆಲ್ ಆವೀವ್, ಜ. 30</strong>– ಸೂಯೆಜ್ ಕಾಲುವೆಯ 45 ಮೈಲಿಯುದ್ದಕ್ಕೂ ಇಸ್ರೇಲ್ ಮತ್ತು ಈಜಿಪ್ಟ್ ಪಡೆಗಳ ನಡುವೆ ಉಗ್ರ ಕಾಳಗ ನಡೆಯಿತು.</p>.<p><strong>ಬೆಂಗಳೂರು ವಾರ್ಸಿಟಿ ಕಾಲೇಜು ಅನಿರ್ದಿಷ್ಟ ಕಾಲ ಬಂದ್</strong></p>.<p><strong>ಬೆಂಗಳೂರು, ಜ. 30– </strong>ಬೆಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಕಾಲೇಜುಗಳನ್ನೂ ನಾಳೆಯಿಂದ ಅನಿರ್ದಿಷ್ಟ ಕಾಲದವರೆಗೆ ಮುಚ್ಚಲಾಗುವುದೆಂದು ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್ ಶ್ರೀ ಪಿ. ಮಲ್ಲಿಕಾರ್ಜುನಪ್ಪನವರು ಇಂದು ರಾತ್ರಿ ತಿಳಿಸಿದರು.</p>.<p><strong>ಕೇಂದ್ರದ ಕ್ರಮ ಕಾದು ನೋಡಿ; ಮುಖ್ಯಮಂತ್ರಿ ಸಲಹೆ</strong></p>.<p><strong>ಬೆಂಗಳೂರು, ಜ. 30</strong>– ‘ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ತೀರ್ಮಾನವನ್ನು ಕೇಂದ್ರ ಸರಕಾರ ಹೇಗೆ ಕಾರ್ಯಗತ ಮಡುವುದೆಂಬುದನ್ನು ಕಾದುನೋಡಿ’ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ, ಶ್ರೀ ಎಸ್. ನಿಜಲಿಂಗಪ್ಪನವರು ಇಂದು ನೀಡಿದ ಹಿತೋಕ್ತಿ.</p>.<p>ಮೈಸೂರು ರಾಜ್ಯವೂ ಮದರಾಸಿನಂತೆ ದ್ವಿಭಾಷಾ ಸೂತ್ರವನ್ನು ಅನುಸರಿಸಬೇಕೆಂದು ನಗರದಲ್ಲಿ ವಿದ್ಯಾರ್ಥಿಗಳು ಒತ್ತಾಯಪಡಿಸುತ್ತಿದ್ದಾರೆಂಬ ಅಂಶ<br /> ವನ್ನು ಬರದಿಗಾರರು ಇಂದು ನಗರಕ್ಕೆ ಹಿಂತಿರುಗಿದ ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ ಮುಖ್ಯಮಂತ್ರಿಯವರು ಮೇಲಿನಂತೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>