<h3><strong>ಭೂಕಂಪ: ಸಾವಿನ ಸಂಖ್ಯೆ 30,000 ಮುಟ್ಟುವ ಶಂಕೆ</strong></h3>.<p>ಅಹ್ಮದಾಬಾದ್, ಜ. 28 (ಯುಎನ್ಐ)– ಗುಜರಾತಿನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂ<br>ಕಂಪದಿಂದ ಸತ್ತವರ ಸಂಖ್ಯೆ ಸತತವಾಗಿ ಏರುತ್ತಿದ್ದು, ಅದು 30,000 ತಲಪುವ<br>ಸಾಧ್ಯತೆ ಇದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಒಂದು ಲಕ್ಷ ಮಂದಿ ಸಿಕ್ಕಿಹಾಕಿ<br>ಕೊಂಡಿರಬೇಕೆಂದು ಶಂಕಿಸಲಾಗಿದೆ.</p>.<p>ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆದಿರುವಂತೆಯೇ ಇಂದು ಬೆಳಗ್ಗೆ ಕಛ್ನ ರಣ್, ಅಹ್ಮದಾಬಾದ್, ರಾಜ್ಕೋಟ್ ಮುಂತಾದ ಕಡೆ ಎರಡು ಭಾರಿ ಭೂಮಿ ಕಂಪಿಸಿತು. </p>.<p>ಬೆಳಗ್ಗೆ ಆರು ಗಂಟೆ 45 ನಿಮಿಷಕ್ಕೆ ಸಂಭವಿಸಿದ ಮೊದಲ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.9ರಷ್ಟಿತ್ತು. ಅದರ ಬೆನ್ನಲ್ಲೇ 4.7ರಷ್ಟಿರುವ ಇನ್ನೊಂದು ಕಂಪನ ಸಂಭವಿಸಿತು.</p>.<h3><strong>ಕಾರ್ಮಿಕರ ಮೇಲೆ ಲಾಠಿ ಪ್ರಹಾರ</strong></h3>.<p>ಕಲ್ಬುರ್ಗಿ, ಜ. 28– ಕಲ್ಲುತೂರಾಟದಲ್ಲಿ ತೊಡಗಿದ್ದ ಶಹಾಬಾದಿನ ಎಚ್ಎಂಪಿ ಸಿಮೆಂಟ್ ಕಾರ್ಖಾನೆಯ ಮುಷ್ಕರ ನಿರತ ಉದ್ರಿಕ್ತ ಕಾರ್ಮಿಕರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರಲ್ಲದೆ, ಕಲ್ಲುತೂರಾಟದಲ್ಲಿ ಒಟ್ಟು 9 ಮಂದಿ ಪೊಲೀಸರು ಗಾಯ<br>ಗೊಂಡ ಘಟನೆ ಶನಿವಾರ ಸಂಭವಿಸಿದೆ.</p>.<p>ಶನಿವಾರ ಕಾರ್ಖಾನೆಯ ಸುಮಾರು 150 ಮಂದಿ ಕಾರ್ಮಿಕರು ಕಾರ್ಖಾನೆಯಲ್ಲಿ ತಮಗೆ ಕೆಲಸ ಕೊಡುವ ಸಂಬಂಧ ಕಾರ್ಖಾನೆ ಗೇಟಿನ ಬಳಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h3><strong>ಭೂಕಂಪ: ಸಾವಿನ ಸಂಖ್ಯೆ 30,000 ಮುಟ್ಟುವ ಶಂಕೆ</strong></h3>.<p>ಅಹ್ಮದಾಬಾದ್, ಜ. 28 (ಯುಎನ್ಐ)– ಗುಜರಾತಿನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂ<br>ಕಂಪದಿಂದ ಸತ್ತವರ ಸಂಖ್ಯೆ ಸತತವಾಗಿ ಏರುತ್ತಿದ್ದು, ಅದು 30,000 ತಲಪುವ<br>ಸಾಧ್ಯತೆ ಇದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಒಂದು ಲಕ್ಷ ಮಂದಿ ಸಿಕ್ಕಿಹಾಕಿ<br>ಕೊಂಡಿರಬೇಕೆಂದು ಶಂಕಿಸಲಾಗಿದೆ.</p>.<p>ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆದಿರುವಂತೆಯೇ ಇಂದು ಬೆಳಗ್ಗೆ ಕಛ್ನ ರಣ್, ಅಹ್ಮದಾಬಾದ್, ರಾಜ್ಕೋಟ್ ಮುಂತಾದ ಕಡೆ ಎರಡು ಭಾರಿ ಭೂಮಿ ಕಂಪಿಸಿತು. </p>.<p>ಬೆಳಗ್ಗೆ ಆರು ಗಂಟೆ 45 ನಿಮಿಷಕ್ಕೆ ಸಂಭವಿಸಿದ ಮೊದಲ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.9ರಷ್ಟಿತ್ತು. ಅದರ ಬೆನ್ನಲ್ಲೇ 4.7ರಷ್ಟಿರುವ ಇನ್ನೊಂದು ಕಂಪನ ಸಂಭವಿಸಿತು.</p>.<h3><strong>ಕಾರ್ಮಿಕರ ಮೇಲೆ ಲಾಠಿ ಪ್ರಹಾರ</strong></h3>.<p>ಕಲ್ಬುರ್ಗಿ, ಜ. 28– ಕಲ್ಲುತೂರಾಟದಲ್ಲಿ ತೊಡಗಿದ್ದ ಶಹಾಬಾದಿನ ಎಚ್ಎಂಪಿ ಸಿಮೆಂಟ್ ಕಾರ್ಖಾನೆಯ ಮುಷ್ಕರ ನಿರತ ಉದ್ರಿಕ್ತ ಕಾರ್ಮಿಕರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರಲ್ಲದೆ, ಕಲ್ಲುತೂರಾಟದಲ್ಲಿ ಒಟ್ಟು 9 ಮಂದಿ ಪೊಲೀಸರು ಗಾಯ<br>ಗೊಂಡ ಘಟನೆ ಶನಿವಾರ ಸಂಭವಿಸಿದೆ.</p>.<p>ಶನಿವಾರ ಕಾರ್ಖಾನೆಯ ಸುಮಾರು 150 ಮಂದಿ ಕಾರ್ಮಿಕರು ಕಾರ್ಖಾನೆಯಲ್ಲಿ ತಮಗೆ ಕೆಲಸ ಕೊಡುವ ಸಂಬಂಧ ಕಾರ್ಖಾನೆ ಗೇಟಿನ ಬಳಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>