ಗದಗ, ನ. 10– ‘ಮೈಸೂರು ಮಂತ್ರಿಮಂಡಲ ಒಗ್ಗಟ್ಟಿನಿಂದ ಮತ್ತು ಸಾಮರಸ್ಯದಿಂದ ಕೆಲಸ ಮಾಡುತ್ತಿದೆ. ಮಂತ್ರಿಮಂಡಲದ ಇತರ ಸದಸ್ಯರು ನನ್ನಲ್ಲಿ ಪೂರ್ಣ ವಿಶ್ವಾಸವಿಟ್ಟು ಕೆಲಸ ಮಾಡುತ್ತಿದ್ದಾರೆ. ಮಂತ್ರಿಮಂಡಲದಲ್ಲಿ ಸಾಮರಸ್ಯವಿಲ್ಲವೆಂಬ ಹೇಳಿಕೆ ಬುಡವಿಲ್ಲದ್ದು’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನಿನ್ನೆ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು.