<p><strong>ಆಲೂಗೆಡ್ಡೆ ಖರೀದಿ ಮತ್ತೆ ಆರಂಭ: ರೈತರಿಗೆ ನೆಮ್ಮದಿ</strong></p>.<p>ಹುಬ್ಬಳ್ಳಿ, ಡಿ. 28– ಹುಬ್ಬಳ್ಳಿಯ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ಹತಾಶನಾದ ರೈತನೊಬ್ಬ ಆಲೂಗೆಡ್ಡೆ ಖರೀದಿ ಕೇಂದ್ರದ ನೌಕರರೊಬ್ಬರ ಮೇಲೆ ಹಲ್ಲೆ ನಡೆಸಿದ ನಂತರ ಎರಡು ದಿನ ಸ್ಥಗಿತಗೊಂಡಿದ್ದ ಆಲೂಗೆಡ್ಡೆ ಖರೀದಿ ಇಂದು ಮುಂಜಾನೆಯಿಂದ ಮತ್ತೆ ಆರಂಭವಾಯಿತು.</p>.<p>ಖರೀದಿ ನಿಂತೇ ಹೋಗುತ್ತದೆ ಎಂದು ಭಾವಿಸಿ ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದ ಬೆಳೆಗಾರರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಚುರುಕಿನ ಖರೀದಿ ಚಟುವಟಿಕೆಗಳು ಇಂದು ಮುಂಜಾನೆ ಎರಡು ಮಾರುಕಟ್ಟೆಗಳಲ್ಲಿ ಆರಂಭವಾದವು.</p>.<p><strong>ಅಸ್ಸಾಂ: ಮತ್ತೆ ಎಂಟು ಹಿಂದಿ ಭಾಷಿಗರ ಹತ್ಯೆ</strong></p>.<p>ಗುವಾಹಟಿ, ಡಿ. 28 (ಪಿಟಿಐ)– ಅಸ್ಸಾಂನಲ್ಲಿರುವ ಹಿಂದಿ ಭಾಷಿಗ ಸಮುದಾಯದ ಮೇಲೆ ನಡೆದ ಇನ್ನೊಂದು ಆಕ್ರಮಣದಲ್ಲಿ ಅಪರಿಚಿತ ದುಷ್ಕರ್ಮಿಗಳು ಎಂಟು ಮಂದಿಯನ್ನು ಕೊಂದಿದ್ದಾರೆ.</p>.<p>ಮೃತರಲ್ಲಿ ಒಬ್ಬ ಮಹಿಳೆ, ಮೂವರು ಮಕ್ಕಳೂ ಸೇರಿದ್ದಾರೆ. ಕರ್ಬಿ ಅಂಗ್ಲೊಂಗ್ ಜಿಲ್ಲೆಯ ರೊಂಗ್ನಗರ, ಗ್ರಾಮಗಳಲ್ಲಿ ಶಸ್ತ್ರಸಜ್ಜಿತ ಉಗ್ರಗಾಮಿಗಳು, ಬಿಹಾರಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲೂಗೆಡ್ಡೆ ಖರೀದಿ ಮತ್ತೆ ಆರಂಭ: ರೈತರಿಗೆ ನೆಮ್ಮದಿ</strong></p>.<p>ಹುಬ್ಬಳ್ಳಿ, ಡಿ. 28– ಹುಬ್ಬಳ್ಳಿಯ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ಹತಾಶನಾದ ರೈತನೊಬ್ಬ ಆಲೂಗೆಡ್ಡೆ ಖರೀದಿ ಕೇಂದ್ರದ ನೌಕರರೊಬ್ಬರ ಮೇಲೆ ಹಲ್ಲೆ ನಡೆಸಿದ ನಂತರ ಎರಡು ದಿನ ಸ್ಥಗಿತಗೊಂಡಿದ್ದ ಆಲೂಗೆಡ್ಡೆ ಖರೀದಿ ಇಂದು ಮುಂಜಾನೆಯಿಂದ ಮತ್ತೆ ಆರಂಭವಾಯಿತು.</p>.<p>ಖರೀದಿ ನಿಂತೇ ಹೋಗುತ್ತದೆ ಎಂದು ಭಾವಿಸಿ ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದ ಬೆಳೆಗಾರರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಚುರುಕಿನ ಖರೀದಿ ಚಟುವಟಿಕೆಗಳು ಇಂದು ಮುಂಜಾನೆ ಎರಡು ಮಾರುಕಟ್ಟೆಗಳಲ್ಲಿ ಆರಂಭವಾದವು.</p>.<p><strong>ಅಸ್ಸಾಂ: ಮತ್ತೆ ಎಂಟು ಹಿಂದಿ ಭಾಷಿಗರ ಹತ್ಯೆ</strong></p>.<p>ಗುವಾಹಟಿ, ಡಿ. 28 (ಪಿಟಿಐ)– ಅಸ್ಸಾಂನಲ್ಲಿರುವ ಹಿಂದಿ ಭಾಷಿಗ ಸಮುದಾಯದ ಮೇಲೆ ನಡೆದ ಇನ್ನೊಂದು ಆಕ್ರಮಣದಲ್ಲಿ ಅಪರಿಚಿತ ದುಷ್ಕರ್ಮಿಗಳು ಎಂಟು ಮಂದಿಯನ್ನು ಕೊಂದಿದ್ದಾರೆ.</p>.<p>ಮೃತರಲ್ಲಿ ಒಬ್ಬ ಮಹಿಳೆ, ಮೂವರು ಮಕ್ಕಳೂ ಸೇರಿದ್ದಾರೆ. ಕರ್ಬಿ ಅಂಗ್ಲೊಂಗ್ ಜಿಲ್ಲೆಯ ರೊಂಗ್ನಗರ, ಗ್ರಾಮಗಳಲ್ಲಿ ಶಸ್ತ್ರಸಜ್ಜಿತ ಉಗ್ರಗಾಮಿಗಳು, ಬಿಹಾರಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>