ಪರಿಹಾರ ನೀಡದಿದ್ದರೆ ಪರಿಸ್ಥಿತಿ ಪ್ರಕೋಪಕ್ಕೆ: ಪಾಕಿಸ್ತಾನಕ್ಕೆ ಎಚ್ಚರಿಕೆ
ನವದೆಹಲಿ, ಫೆ. 9– ಭಾರತೀಯ ವಿಮಾನವನ್ನು ನಾಶಪಡಿಸಿದ್ದರಿಂದ ಉಂಟಾದ ನಷ್ಟವನ್ನು ತುಂಬಿಕೊಡದಿದ್ದರೆ ಮತ್ತು ವಿಮಾನ ಅಪಹರಿಸಿದವರನ್ನು ವಿಚಾರಣೆಗಾಗಿ ಭಾರತಕ್ಕೆ ಹಿಂತಿರುಗಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವುದು ಎಂದು ಭಾರತ ಸರ್ಕಾರ ಇಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತು.
ಚಲನಚಿತ್ರ ಸಹಾಯಧನ ಪರಿಶೀಲನೆಗೆ ಉಪಸಮಿತಿ
ಬೆಂಗಳೂರು, ಫೆ. 9– ರಾಜ್ಯದಲ್ಲಿ ತಯಾರಾದ ಚಲನಚಿತ್ರಗಳಿಗೆ ಮೈಸೂರು ಸರ್ಕಾರ ನೀಡುತ್ತಿರುವ ಸಹಾಯಧನದ ಬಗ್ಗೆ ಪರಿಶೀಲನೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಮಾಡಲು ಮೂವರು ಸಚಿವರಿಂದ ಕೂಡಿದ ಉಪ ಸಮಿತಿಯೊಂದನ್ನು ರಚಿಸಲಾಗಿದೆ.