ಮೈಸೂರು, ಜುಲೈ 20– ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಸ್ಥಳದ 46 ಮಂದಿ ಬಡ ಶ್ರೀವೈಷ್ಣವ ವಿದ್ಯಾರ್ಥಿಗಳಿಗೆ ಇಲ್ಲಿನ ಶ್ರೀ ಪರ ಕಾಲಮಠದಲ್ಲಿ ನಿತ್ಯಪಡಿ (ಅನ್ನದ ಉಂಡೆ) ಕೊಡಲಾಗುತ್ತಿದ್ದು, ಮಠದ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಕಲೆವು ನಿಯಮಗಳನ್ನು ವಿಧಿಸಿದ್ದು, ವಿದ್ಯಾರ್ಥಿಗಳು ಬಂಡಾಯವೆದ್ದಿದ್ದಾರೆ. ಇದರ ಫಲವಾಗಿ ಬುಧವಾರ ಬೆಳಿಗ್ಗೆಯಿಂದ ನಿತ್ಯಪಡಿಯನ್ನು ನಿಲ್ಲಿಸಲಾಗಿದೆ.