<p><strong>ಆಪಾದನೆಗಳನ್ನು ಕುರಿತು ಯು.ಜಿ.ಸಿ. ಇಂದ ತನಿಖೆ</strong></p>.<p><strong>ಬೆಂಗಳೂರು, ಸೆ. 8–</strong> ವಿಶ್ವವಿದ್ಯಾನಿಲಯ ಆಡಳಿತದ ಮೇಲೆ ಮಾಡಿರುವ ಆಪಾದನೆಗಳ ವಿಶ್ವವಿದ್ಯಾನಿಲಯ ಅನುದಾನ ಆಯೋಗದಿಂದ ವಿಚಾರಣೆ ನಡೆಸುವ ಭರವಸೆಯನ್ನು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಮುಷ್ಕರ ಹಾಗೂ ಉಪವಾಸವನ್ನು ನಿಲ್ಲಿಸಬೇಕೆಂದು ಇಂದು ರಾತ್ರಿ ವಿದ್ಯಾರ್ಥಿ ಕ್ರಿಯಾ ಸಮಿತಿಯನ್ನು ಪ್ರಾರ್ಥಿಸಿದರು.</p>.<p>ಕ್ರಿಯಾ ಸಮಿತಿಯ ಪ್ರಾರ್ಥನೆ ಮೇರೆಗೆ ಶಿಕ್ಷಣ ಸಚಿವರು ತಮ್ಮ ಸಲಹೆಯನ್ನು ಕುರಿತು ಮಂಗಳವಾರ 12 ಗಂಟೆಗೆ ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಲು ಒಪ್ಪಿದ್ದಾರೆ.</p>.<p><strong>ಕ್ರಿಯಾ ಸಮಿತಿ ಮನವಿ: </strong>ನಗರದ ಕಾಲೇಜು ವಿದ್ಯಾರ್ಥಿಗಳು ನಾಳೆ 12 ಗಂಟೆಗೆ ವಿಶ್ವವಿದ್ಯಾನಿಲಯದ ಕಚೇರಿ ಆವರಣದಲ್ಲಿ ಶಾಂತಿಯುತವಾಗಿ ಬಂದು ಸೇರಿ ಅಹಿಂಸಾವರ್ತಿಗಳಾಗಿ ಸಹಕರಿಸಿ ಸಚಿವರು ಹೇಳುವುದನ್ನು ಕೇಳಬೇಕೆಂದು ವಿದ್ಯಾರ್ಥಿ ಕ್ರಿಯಾ ಸಮಿತಿ ಕೋರಿದೆ.</p>.<p><strong>‘ಸಂಶಯ, ತಪ್ಪು ತಿಳಿವಳಿಕೆ’ಗಳ ನಿವಾರಣೆಗೆ ಇಂದಿರಾ –ಎಸ್ಸೆನ್ ಚರ್ಚೆ</strong></p>.<p><strong>ನವದೆಹಲಿ, ಸೆ. 8–</strong> ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಬಿಕ್ಕಟ್ಟಿಗೆ ಕಾರಣವಾದ ‘ಸಂಶಯಗಳ ಮತ್ತು ತಪ್ಪು ತಿಳುವಳಿಕೆಗಳ’ ನಿವಾರಣೆಗಾಗಿ ಇಂದು ಇಲ್ಲಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಮತ್ತು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ನಡುವೆ ಇಪ್ಪತ್ತು ನಿಮಿಷಗಳ ಕಾಲ ಮಾತುಕತೆ ನಡೆಯಿತು.</p>.<p>ಪ್ರಧಾನಿಯವರ ನಿವಾಸದಲ್ಲಿ ನಡೆದ ಈ ಭೇಟಿಯನ್ನು ‘ತುಂಬಾ ಸ್ನೇಹ ಪೂರ್ಣ ಹಾಗೂ ಹಾರ್ದಿಕ’ ಎಂದು ಬಣ್ಣಿಸಿದ ಶ್ರೀ ನಿಜಲಿಂಗಪ್ಪನವರು, ‘ಇದು ಕೇವಲ ಪೂರ್ವಭಾವಿ ಮಾತುಕತೆ ನಾವಿನ್ನೂ ಯಾವುದೇ ನಿರ್ದಿಷ್ಟ, ಗಾಢ ಚರ್ಚೆಗೆ ಬಂದಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<p>ಪದೇ ಪದೇ ಸಮಾಲೋಚನೆಗಳನ್ನು ನಡೆಸುವ ಅಗತ್ಯದ ಬಗ್ಗೆ ತಾವು ಮತ್ತು ಶ್ರೀಮತಿ ಗಾಂಧಿ ಅವರು ಒಪ್ಪಿಕೊಂಡಿರುವುದಾಗಿಯೂ, ಎರಡನೇ ಸುತ್ತಿನ ಮಾತುಕತೆಗಳು ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ನಡೆಯಬಹುದೆಂದೂ ಅವರು ಹೇಳಿದರು.</p>.<p><strong>ಆರೋಪಸಾಬೀತಾಗದೆ ನಗರ ವಾರ್ಸಿಟಿ ರಿಜಿಸ್ಟ್ರಾರ್ ವಿರುದ್ಧ ಕ್ರಮ ಅಸಾಧ್ಯ</strong></p>.<p><strong>ಬೆಂಗಳೂರು, ಸೆ. 8</strong>– ಅವರ ಮೇಲೆ ಹೊರೆಸಿರುವ ಆಪಾದನೆಗಳು ರುಜುವಾತು ಆಗದ ಹೊರತು ಬೆಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಅವರನ್ನು ತೆಗೆಯಲು ಸಾಧ್ಯವಿಲ್ಲವೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಪಾದನೆಗಳನ್ನು ಕುರಿತು ಯು.ಜಿ.ಸಿ. ಇಂದ ತನಿಖೆ</strong></p>.<p><strong>ಬೆಂಗಳೂರು, ಸೆ. 8–</strong> ವಿಶ್ವವಿದ್ಯಾನಿಲಯ ಆಡಳಿತದ ಮೇಲೆ ಮಾಡಿರುವ ಆಪಾದನೆಗಳ ವಿಶ್ವವಿದ್ಯಾನಿಲಯ ಅನುದಾನ ಆಯೋಗದಿಂದ ವಿಚಾರಣೆ ನಡೆಸುವ ಭರವಸೆಯನ್ನು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಮುಷ್ಕರ ಹಾಗೂ ಉಪವಾಸವನ್ನು ನಿಲ್ಲಿಸಬೇಕೆಂದು ಇಂದು ರಾತ್ರಿ ವಿದ್ಯಾರ್ಥಿ ಕ್ರಿಯಾ ಸಮಿತಿಯನ್ನು ಪ್ರಾರ್ಥಿಸಿದರು.</p>.<p>ಕ್ರಿಯಾ ಸಮಿತಿಯ ಪ್ರಾರ್ಥನೆ ಮೇರೆಗೆ ಶಿಕ್ಷಣ ಸಚಿವರು ತಮ್ಮ ಸಲಹೆಯನ್ನು ಕುರಿತು ಮಂಗಳವಾರ 12 ಗಂಟೆಗೆ ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಲು ಒಪ್ಪಿದ್ದಾರೆ.</p>.<p><strong>ಕ್ರಿಯಾ ಸಮಿತಿ ಮನವಿ: </strong>ನಗರದ ಕಾಲೇಜು ವಿದ್ಯಾರ್ಥಿಗಳು ನಾಳೆ 12 ಗಂಟೆಗೆ ವಿಶ್ವವಿದ್ಯಾನಿಲಯದ ಕಚೇರಿ ಆವರಣದಲ್ಲಿ ಶಾಂತಿಯುತವಾಗಿ ಬಂದು ಸೇರಿ ಅಹಿಂಸಾವರ್ತಿಗಳಾಗಿ ಸಹಕರಿಸಿ ಸಚಿವರು ಹೇಳುವುದನ್ನು ಕೇಳಬೇಕೆಂದು ವಿದ್ಯಾರ್ಥಿ ಕ್ರಿಯಾ ಸಮಿತಿ ಕೋರಿದೆ.</p>.<p><strong>‘ಸಂಶಯ, ತಪ್ಪು ತಿಳಿವಳಿಕೆ’ಗಳ ನಿವಾರಣೆಗೆ ಇಂದಿರಾ –ಎಸ್ಸೆನ್ ಚರ್ಚೆ</strong></p>.<p><strong>ನವದೆಹಲಿ, ಸೆ. 8–</strong> ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಬಿಕ್ಕಟ್ಟಿಗೆ ಕಾರಣವಾದ ‘ಸಂಶಯಗಳ ಮತ್ತು ತಪ್ಪು ತಿಳುವಳಿಕೆಗಳ’ ನಿವಾರಣೆಗಾಗಿ ಇಂದು ಇಲ್ಲಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಮತ್ತು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ನಡುವೆ ಇಪ್ಪತ್ತು ನಿಮಿಷಗಳ ಕಾಲ ಮಾತುಕತೆ ನಡೆಯಿತು.</p>.<p>ಪ್ರಧಾನಿಯವರ ನಿವಾಸದಲ್ಲಿ ನಡೆದ ಈ ಭೇಟಿಯನ್ನು ‘ತುಂಬಾ ಸ್ನೇಹ ಪೂರ್ಣ ಹಾಗೂ ಹಾರ್ದಿಕ’ ಎಂದು ಬಣ್ಣಿಸಿದ ಶ್ರೀ ನಿಜಲಿಂಗಪ್ಪನವರು, ‘ಇದು ಕೇವಲ ಪೂರ್ವಭಾವಿ ಮಾತುಕತೆ ನಾವಿನ್ನೂ ಯಾವುದೇ ನಿರ್ದಿಷ್ಟ, ಗಾಢ ಚರ್ಚೆಗೆ ಬಂದಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<p>ಪದೇ ಪದೇ ಸಮಾಲೋಚನೆಗಳನ್ನು ನಡೆಸುವ ಅಗತ್ಯದ ಬಗ್ಗೆ ತಾವು ಮತ್ತು ಶ್ರೀಮತಿ ಗಾಂಧಿ ಅವರು ಒಪ್ಪಿಕೊಂಡಿರುವುದಾಗಿಯೂ, ಎರಡನೇ ಸುತ್ತಿನ ಮಾತುಕತೆಗಳು ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ನಡೆಯಬಹುದೆಂದೂ ಅವರು ಹೇಳಿದರು.</p>.<p><strong>ಆರೋಪಸಾಬೀತಾಗದೆ ನಗರ ವಾರ್ಸಿಟಿ ರಿಜಿಸ್ಟ್ರಾರ್ ವಿರುದ್ಧ ಕ್ರಮ ಅಸಾಧ್ಯ</strong></p>.<p><strong>ಬೆಂಗಳೂರು, ಸೆ. 8</strong>– ಅವರ ಮೇಲೆ ಹೊರೆಸಿರುವ ಆಪಾದನೆಗಳು ರುಜುವಾತು ಆಗದ ಹೊರತು ಬೆಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಅವರನ್ನು ತೆಗೆಯಲು ಸಾಧ್ಯವಿಲ್ಲವೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>