ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಇಂದು
ಬೆಂಗಳೂರು, ಅ. 19 - ಮೈಸೂರು ಪ್ರದೇಶ ಕಾಂಗ್ರೆಸ್ಸಿನ ಚುನಾವಣಾ ಸಮಿತಿಯ ಸಭೆ ನಾಳೆ ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಭವನದಲ್ಲಿ ಸಮಾವೇಶಗೊಳ್ಳಲಿದೆ.
ಹೌರಾ - ರಾಂಚಿ ರೈಲಿಗೆ ಅಪಘಾತ; 30 ಸಾವು
ಕಲ್ಕತ್ತ, ಅ. 19 - ಹೌರಾ - ರಾಂಚಿ ಎಕ್ಸ್ಪ್ರೆಸ್ ರೈಲು ಇಂದು ಬೆಳಗಿನ ಜಾವ 2-30 ಗಂಟೆ ಸಮಯದಲ್ಲಿ ಅಪಘಾತಕ್ಕೀಡಾಗಿ 30 ಮಂದಿ ಪ್ರಯಾಣಿಕರು ಸತ್ತಿದ್ದಾರೆ ಎಂದು ಆಗ್ನೇಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.