‘ಪ್ರಶಸ್ತಿ ಬೇಡ ಸಂಸ್ಥೆಗೆ ಹಣ, ಭೂಮಿ ಕೊಡಿ’
ಬೆಂಗಳೂರು, ನ. 7– ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಶ್ರೀ ರಾಘವೇಂದ್ರಸ್ವಾಮಿಗಳು ಸರ್ಕಾರ ನೀಡಬೇಕೆಂದಿರುವ ರಾಜ್ಯ ಪ್ರಶಸ್ತಿಯನ್ನು 3ನೇ ಬಾರಿಗೆ ‘ನಮ್ರತೆಯಿಂದ ನಿರಾಕರಿಸಿ’ ಅದಕ್ಕೆ ಬದಲಾಗಿ ಮಲ್ಲಾಡಿಹಳ್ಳಿಯ ವಿದ್ಯಾಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳಿಗಾಗಿ ಹಣ ಸಹಾಯ ಹಾಗೂ ಜಮೀನನ್ನು ಕೇಳಿದ್ದಾರೆ.