<p><strong>ಮಹಾಜನ್ ವರದಿ ಚವಾಣರ ಅಧಿಕಾರ ವ್ಯಾಪ್ತಿಯಿಂದ ದೂರವಿರಲೆಂದು ಒತ್ತಾಯ</strong></p>.<p><strong>ಬೆಂಗಳೂರು, ಡಿ. 9– </strong>ಶ್ರೀ. ವೈ.ಬಿ. ಚವಾಣ್ರವರು ಮಹಾಜನ್ ಆಯೋಗದ ವರದಿಯ ಬಗ್ಗೆ ಕೇಂದ್ರದ ಗೃಹ ಸಚಿವರಾಗಿ ವ್ಯವಹರಿಸದಂತೆ ತಡೆಯಬೇಕೆಂದು ಸ್ವತಂತ್ರ ಸದಸ್ಯ ಶ್ರೀ ಜೆ.ಬಿ. ಮಲ್ಲಾರಾಧ್ಯ ಅವರು ಪ್ರಧಾನಮಂತ್ರಿಯನ್ನು ಇಂದು ಒತ್ತಾಯಪಡಿಸಿದರು.</p>.<p>ಶ್ರೀ ಚವಾಣ್ರವರು ಗೃಹಮಂತ್ರಿಯಾಗಿ ಮೈಸೂರು–ಮಹಾರಾಷ್ಟ್ರ–ಕೇರಳ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ತಮ್ಮ ಅಧಿಕಾರವನ್ನು ನಿರ್ವಹಿಸಿದರೆ ‘ನಮಗೆ ನ್ಯಾಯ ದೊರೆಯುವುದಿಲ್ಲ’ ಎಂದು ಶ್ರೀ ಮಲ್ಲಾರಾಧ್ಯರು ಶಂಕಿಸಿದರು.</p>.<p>**</p>.<p><strong>ಭಾರತದಲ್ಲೊಂದು ಬರ್ಲಿನ್!</strong></p>.<p><strong>ಬೆಂಗಳೂರು, ಡಿ. 9–</strong> ಬೆಳಗಾವಿಯನ್ನು ಬರ್ಲಿನ್ನಂತೆ ವಿಭಜಿಸಿ ಮೈಸೂರು ಮತ್ತು ಮಹಾರಾಷ್ಟ್ರ ಸಮವಾಗಿ ಹಂಚಿಕೊಳ್ಳಬೇಕೆಂದು ಮಹಾರಾಷ್ಟ್ರದ ನಾಯಕರು ಸಲಹೆ ಮಾಡಿರುವರಂತೆ!</p>.<p>ಇಂದು ವಿಧಾನ ಪರಿಷತ್ತಿನಲ್ಲಿ ಮಹಾಜನ್ ಆಯೋಗದ ಚರ್ಚೆಯಲ್ಲಿ ಭಾಗವಹಿಸಿದ್ದ ಶ್ರೀ ಜೆ.ಬಿ. ಮಲ್ಲಾರಾಧ್ಯರವರು ಮಹಾರಾಷ್ಟ್ರದ ನಾಯಕರು ಈ ರೀತಿ ಸಲಹೆ ಮಾಡಿರುವರೆಂದು ತಮಗೆ ಗೊತ್ತಾಗಿದೆ ಎಂದರು.</p>.<p>‘ಬೆಳಗಾವಿಯು ಮಹಾರಾಷ್ಟ್ರೀಯರಿಗೆ ಸಾವು–ಬದುಕಿನ ಪ್ರಶ್ನೆಯಾಗಿರುವಂತೆ ಕಂಡು ಬರುತ್ತದೆ’ ಎಂದ ಮಲ್ಲಾರಾಧ್ಯರು ಈ ‘ಸಲಹೆಯನ್ನು’ ಮಾಡಿರುವುದು ‘ಅತಿ ವಕ್ರವಾದ ವಾದ’ ಎಂದು ಟೀಕಿಸಿದರು.</p>.<p>**</p>.<p><strong>ಮದ್ರಾಸ್ ರಾಜ್ಯದಲ್ಲಿ ಭಾರಿ ಮಳೆ ಹಾವಳಿ</strong></p>.<p><strong>ಮದ್ರಾಸ್, ಡಿ. 9– </strong>ಎರಡು ದಿನ ಬಿದ್ದ ಭಾರಿ ಮಳೆಗೆ ಸಿಕ್ಕಿ ಮದ್ರಾಸ್ ರಾಜ್ಯದ ತೀರದ ಜಿಲ್ಲೆಗಳಲ್ಲಿ 7 ಮಂದಿ ಮರಣ ಹೊಂದಿದರಲ್ಲದೆ, ಹತ್ತಾರು ಸಾವಿರ ಮಂದಿ ನಿರ್ವಸಿತರಾದರು.</p>.<p>ಅಧಿಕ ಮಳೆ ದೆಸೆಯಿಂದ ಕಾಂಚೀಪುರ ಒಂದರಲ್ಲೇ ಮನೆ ಕುಸಿದು ಕುಟುಂಬದ ನಾಲ್ವರು ಸಾವಿಗೀಡಾದರು.</p>.<p><strong>**</strong></p>.<p><strong>ಸೂರ್ಯ ಕಾಣದ ಎರಡನೇ ದಿನ</strong></p>.<p><strong>ಬೆಂಗಳೂರು, ಡಿ. 9–</strong> ಸೂರ್ಯ ಕಾಣದ ಎರಡನೆಯ ದಿನ. ನಗರದ ಜನ ದಿನವೆಲ್ಲ ಛತ್ರಿ ಹಿಡಿದು ನಡೆದರು.</p>.<p>ನಿನ್ನೆ ಬೆಳಿಗ್ಗೆ ಆರಂಭವಾದ ಮಳೆ ಇಂದು ಬಹುರಾತ್ರಿಯವರೆಗೆ ಹನಿಯುತ್ತಲೇ ಇತ್ತು.</p>.<p>ಆಗಾಗ್ಗೆ ಕೆಲವು ನಿಮಿಷಗಳ ಕಾಲ ಬಿಡುವು ದೊರಕಿದರೂ ಕಪ್ಪು ಮೋಡ ಸದಾ ಕವಿದಿತ್ತು.</p>.<p>ನಾಳೆಯೂ ಸಂಜೆಯವರೆಗೆ ಮೋಡ ಕವಿದ ವಾತಾವರಣ, ಆಗಾಗ್ಗೆ ಮಳೆ, ಸಂಜೆ ನಂತರ ಮೋಡ ಚದುರುವ ನಿರೀಕ್ಷೆ.</p>.<p><strong>**</strong></p>.<p><strong>ಸಾಗುವಳಿಗೆ ಸಿಕ್ಕುವ ಭೂಮಿ ಬಗೆಗೆ ಸರ್ವೆ</strong></p>.<p><strong>ಬೆಂಗಳೂರು, ಡಿ. 9– </strong>ರಾಜ್ಯದಲ್ಲಿ ವ್ಯವಸಾಯಕ್ಕೆ ದೊರೆಯುವ ಸರ್ಕಾರಿ ಜಮೀನಿನ ಬಗ್ಗೆ ಪ್ರತ್ಯೇಕ ಸರ್ವೆ ಮಾಡಲಾಗುತ್ತಿದ್ದು ಅದು ಪೂರೈಸಿದ ಕೂಡಲೆ ತಾಲ್ಲೂಕುವಾರು ಪಟ್ಟಿ ಪ್ರಕಟಿಸಲಾಗುವುದೆಂದು ಕಂದಾಯ ಸಚಿವ ಶ್ರೀ ಬಿ. ರಾಚಯ್ಯನವರು ಇಂದು ವಿಧಾನ ಸಭೆಗೆ ತಿಳಿಸಿದರು.</p>.<p>ಶ್ರೀಮತಿ ವಿನಿಫ್ರೆಡ್ ಎಫ್. ಫರ್ನಾಂಡೀಸ್ (ಪಿ.ಎಸ್.ಪಿ.– ಕುಂದಾಪುರ) ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ಕಾರ್ಕಳ ತಾಲ್ಲೂಕಿನಲ್ಲಿ 2,725 ಎಕರೆ, ಉಡುಪಿ 1,642 ಎಕರೆ ಮತ್ತು ಕುಂದಾಪುರ ತಾಲ್ಲೂಕಿನಲ್ಲಿ 1,477 ಎಕರೆ ಬಂಜರು ಭೂಮಿ ಇದೆಯೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಜನ್ ವರದಿ ಚವಾಣರ ಅಧಿಕಾರ ವ್ಯಾಪ್ತಿಯಿಂದ ದೂರವಿರಲೆಂದು ಒತ್ತಾಯ</strong></p>.<p><strong>ಬೆಂಗಳೂರು, ಡಿ. 9– </strong>ಶ್ರೀ. ವೈ.ಬಿ. ಚವಾಣ್ರವರು ಮಹಾಜನ್ ಆಯೋಗದ ವರದಿಯ ಬಗ್ಗೆ ಕೇಂದ್ರದ ಗೃಹ ಸಚಿವರಾಗಿ ವ್ಯವಹರಿಸದಂತೆ ತಡೆಯಬೇಕೆಂದು ಸ್ವತಂತ್ರ ಸದಸ್ಯ ಶ್ರೀ ಜೆ.ಬಿ. ಮಲ್ಲಾರಾಧ್ಯ ಅವರು ಪ್ರಧಾನಮಂತ್ರಿಯನ್ನು ಇಂದು ಒತ್ತಾಯಪಡಿಸಿದರು.</p>.<p>ಶ್ರೀ ಚವಾಣ್ರವರು ಗೃಹಮಂತ್ರಿಯಾಗಿ ಮೈಸೂರು–ಮಹಾರಾಷ್ಟ್ರ–ಕೇರಳ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ತಮ್ಮ ಅಧಿಕಾರವನ್ನು ನಿರ್ವಹಿಸಿದರೆ ‘ನಮಗೆ ನ್ಯಾಯ ದೊರೆಯುವುದಿಲ್ಲ’ ಎಂದು ಶ್ರೀ ಮಲ್ಲಾರಾಧ್ಯರು ಶಂಕಿಸಿದರು.</p>.<p>**</p>.<p><strong>ಭಾರತದಲ್ಲೊಂದು ಬರ್ಲಿನ್!</strong></p>.<p><strong>ಬೆಂಗಳೂರು, ಡಿ. 9–</strong> ಬೆಳಗಾವಿಯನ್ನು ಬರ್ಲಿನ್ನಂತೆ ವಿಭಜಿಸಿ ಮೈಸೂರು ಮತ್ತು ಮಹಾರಾಷ್ಟ್ರ ಸಮವಾಗಿ ಹಂಚಿಕೊಳ್ಳಬೇಕೆಂದು ಮಹಾರಾಷ್ಟ್ರದ ನಾಯಕರು ಸಲಹೆ ಮಾಡಿರುವರಂತೆ!</p>.<p>ಇಂದು ವಿಧಾನ ಪರಿಷತ್ತಿನಲ್ಲಿ ಮಹಾಜನ್ ಆಯೋಗದ ಚರ್ಚೆಯಲ್ಲಿ ಭಾಗವಹಿಸಿದ್ದ ಶ್ರೀ ಜೆ.ಬಿ. ಮಲ್ಲಾರಾಧ್ಯರವರು ಮಹಾರಾಷ್ಟ್ರದ ನಾಯಕರು ಈ ರೀತಿ ಸಲಹೆ ಮಾಡಿರುವರೆಂದು ತಮಗೆ ಗೊತ್ತಾಗಿದೆ ಎಂದರು.</p>.<p>‘ಬೆಳಗಾವಿಯು ಮಹಾರಾಷ್ಟ್ರೀಯರಿಗೆ ಸಾವು–ಬದುಕಿನ ಪ್ರಶ್ನೆಯಾಗಿರುವಂತೆ ಕಂಡು ಬರುತ್ತದೆ’ ಎಂದ ಮಲ್ಲಾರಾಧ್ಯರು ಈ ‘ಸಲಹೆಯನ್ನು’ ಮಾಡಿರುವುದು ‘ಅತಿ ವಕ್ರವಾದ ವಾದ’ ಎಂದು ಟೀಕಿಸಿದರು.</p>.<p>**</p>.<p><strong>ಮದ್ರಾಸ್ ರಾಜ್ಯದಲ್ಲಿ ಭಾರಿ ಮಳೆ ಹಾವಳಿ</strong></p>.<p><strong>ಮದ್ರಾಸ್, ಡಿ. 9– </strong>ಎರಡು ದಿನ ಬಿದ್ದ ಭಾರಿ ಮಳೆಗೆ ಸಿಕ್ಕಿ ಮದ್ರಾಸ್ ರಾಜ್ಯದ ತೀರದ ಜಿಲ್ಲೆಗಳಲ್ಲಿ 7 ಮಂದಿ ಮರಣ ಹೊಂದಿದರಲ್ಲದೆ, ಹತ್ತಾರು ಸಾವಿರ ಮಂದಿ ನಿರ್ವಸಿತರಾದರು.</p>.<p>ಅಧಿಕ ಮಳೆ ದೆಸೆಯಿಂದ ಕಾಂಚೀಪುರ ಒಂದರಲ್ಲೇ ಮನೆ ಕುಸಿದು ಕುಟುಂಬದ ನಾಲ್ವರು ಸಾವಿಗೀಡಾದರು.</p>.<p><strong>**</strong></p>.<p><strong>ಸೂರ್ಯ ಕಾಣದ ಎರಡನೇ ದಿನ</strong></p>.<p><strong>ಬೆಂಗಳೂರು, ಡಿ. 9–</strong> ಸೂರ್ಯ ಕಾಣದ ಎರಡನೆಯ ದಿನ. ನಗರದ ಜನ ದಿನವೆಲ್ಲ ಛತ್ರಿ ಹಿಡಿದು ನಡೆದರು.</p>.<p>ನಿನ್ನೆ ಬೆಳಿಗ್ಗೆ ಆರಂಭವಾದ ಮಳೆ ಇಂದು ಬಹುರಾತ್ರಿಯವರೆಗೆ ಹನಿಯುತ್ತಲೇ ಇತ್ತು.</p>.<p>ಆಗಾಗ್ಗೆ ಕೆಲವು ನಿಮಿಷಗಳ ಕಾಲ ಬಿಡುವು ದೊರಕಿದರೂ ಕಪ್ಪು ಮೋಡ ಸದಾ ಕವಿದಿತ್ತು.</p>.<p>ನಾಳೆಯೂ ಸಂಜೆಯವರೆಗೆ ಮೋಡ ಕವಿದ ವಾತಾವರಣ, ಆಗಾಗ್ಗೆ ಮಳೆ, ಸಂಜೆ ನಂತರ ಮೋಡ ಚದುರುವ ನಿರೀಕ್ಷೆ.</p>.<p><strong>**</strong></p>.<p><strong>ಸಾಗುವಳಿಗೆ ಸಿಕ್ಕುವ ಭೂಮಿ ಬಗೆಗೆ ಸರ್ವೆ</strong></p>.<p><strong>ಬೆಂಗಳೂರು, ಡಿ. 9– </strong>ರಾಜ್ಯದಲ್ಲಿ ವ್ಯವಸಾಯಕ್ಕೆ ದೊರೆಯುವ ಸರ್ಕಾರಿ ಜಮೀನಿನ ಬಗ್ಗೆ ಪ್ರತ್ಯೇಕ ಸರ್ವೆ ಮಾಡಲಾಗುತ್ತಿದ್ದು ಅದು ಪೂರೈಸಿದ ಕೂಡಲೆ ತಾಲ್ಲೂಕುವಾರು ಪಟ್ಟಿ ಪ್ರಕಟಿಸಲಾಗುವುದೆಂದು ಕಂದಾಯ ಸಚಿವ ಶ್ರೀ ಬಿ. ರಾಚಯ್ಯನವರು ಇಂದು ವಿಧಾನ ಸಭೆಗೆ ತಿಳಿಸಿದರು.</p>.<p>ಶ್ರೀಮತಿ ವಿನಿಫ್ರೆಡ್ ಎಫ್. ಫರ್ನಾಂಡೀಸ್ (ಪಿ.ಎಸ್.ಪಿ.– ಕುಂದಾಪುರ) ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ಕಾರ್ಕಳ ತಾಲ್ಲೂಕಿನಲ್ಲಿ 2,725 ಎಕರೆ, ಉಡುಪಿ 1,642 ಎಕರೆ ಮತ್ತು ಕುಂದಾಪುರ ತಾಲ್ಲೂಕಿನಲ್ಲಿ 1,477 ಎಕರೆ ಬಂಜರು ಭೂಮಿ ಇದೆಯೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>