* ಟಿ. ಶಾಮಣ್ಣ ನೂತನ ಕೈಗಾರಿಕಾ ಕಮಿಷನರ್
ಬೆಂಗಳೂರು, ಮೇ 9– ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಡೈರಕ್ಟರ್ ಶ್ರೀ ಟಿ. ಶಾಮಣ್ಣನವರನ್ನು ರಾಜ್ಯದ ಕೈಗಾರಿಕಾ ಕಮಿಷನರ್ ಆಗಿ ನೇಮಿಸಲಾಗಿದೆ. ಈ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಲಾಗಿದೆ. ಆಹಾರ ಇಲಾಖೆಯ ಡೈರಕ್ಟರ್ ಆಗಿದ್ದ ಶ್ರೀ ಮಣಿನಾರಾಯಣ ಸ್ವಾಮಿ ಅವರನ್ನು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಡೈರಕ್ಟರ್ ಆಗಿ ನೇಮಿಸಲಾಗಿದೆ.