ಕಾವೇರಿಯಿಂದ ನಗರಕ್ಕೆ ನೀರು ಸರಬರಾಜು
ಬೆಂಗಳೂರು, ಜೂನ್ 16 - ಬೆಂಗಳೂರು ನಗರಕ್ಕೆ ನಿರಂತವಾಗಿ ನೀರು ಸರಬರಾಜು ಮಾಡಲು ಒಂದು ಯೋಜನೆಯನ್ನು ತಯಾರಿಸಿ, ಅದನ್ನು ಆದಷ್ಟು ಜಾಗ್ರತೆ ಕಾರ್ಯಗತ ಮಾಡುವುದಗತ್ಯವೆಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ತಿಳಿಸಿದರು.
ಗೋಪಾಲನ್ ವಿರುದ್ಧ ಮೊಕದ್ದಮೆ ವಾಪಸ್
ತಿರುವನಂತಪುರ, ಜೂನ್ 16 - ಕಮ್ಯುನಿಸ್ಟ್ ನಾಯಕ ಎ. ಕೆ. ಗೋಪಾಲನ್ ವಿರುದ್ಧ ಮೊಕದ್ದಮೆಯನ್ನು ಮುಂದುವರಿಸಬಾರದೆಂದೂ ಮೊಕದ್ದಮೆ ವಾಪಸ್ ಪಡೆಯಲು ಕ್ರಮಕೈಗೊಳ್ಳಬೇಕೆಂದೂ ಸರ್ಕಾರ ನಿರ್ಧರಿಸಿದೆ.