<p><strong>ಮಂಗಳೂರಿನಲ್ಲಿ ಕರ್ಫ್ಯೂ ವೇಳೆಯಲ್ಲಿ ಲೂಟಿ<br /> ಮಂಗಳೂರು, ಏ. 21–</strong> ಕೋಮುವಾರು ಗಲಭೆಯಿಂದ ಪ್ರಕ್ಷುಬ್ಧ ಸ್ಥಿತಿ ಒದಗಿರುವ ಮಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಮುಂಜಾನೆಯವರೆಗೆ ಕರ್ಫ್ಯೂ ಜಾರಿಯಲ್ಲಿದ್ದರೂ, ಲೂಟಿ ಮತ್ತು ಬೆಂಕಿ ಹಚ್ಚುವ ಕೃತ್ಯಗಳು ರಾತ್ರಿಯೆಲ್ಲಾ ನಿಲ್ಲದೆ ನಡೆದವು.</p>.<p>ವ್ಯಾಪಾರ ವಹಿವಾಟಿನ ಪ್ರಮುಖ ಕೇಂದ್ರವಾದ ಬಂದರ್ ಪ್ರದೇಶದಲ್ಲಿ ಅನೇಕ ದಾಸ್ತಾನು ಮಳಿಗೆಗಳಿಗೆ ಗೂಂಡಾಗಳು ಬೆಂಕಿ ಹಚ್ಚಿದ್ದರು. ಆಗ್ನಿಶಾಮಕ ದಳದವರ 12 ಗಂಟೆಗಳ ಹೋರಾಟದ ನಂತರವೂ ಇಂದು ಬೆಳಿಗ್ಗೆ ಬಂದರ್ ಪ್ರದೇಶದ ಮೇಲೆ ಹೊಗೆಯ ಮೋಡಗಳು ಕವಿದಿದ್ದವು.</p>.<p><strong>ಡಾ. ಆಳ್ವ ಕಳವಳ<br /> ಬೆಂಗಳೂರು, ಏ. 21– </strong>ಕಳೆದ ಎರಡು ದಿನಗಳಿಂದ ಮಂಗಳೂರಿನಲ್ಲಿ ಆಗಿರುವ ಶಾಂತಿ ಭಂಗವು ತಮಗೆ ನೋವನ್ನುಂಟುಮಾಡಿದೆಯೆಂದು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ. ಕೆ. ನಾಗಪ್ಪ ಆಳ್ವ ಅವರು ಆತಂಕ ವ್ಯಕ್ತಪಡಿಸಿ, ದಕ್ಷಿಣ ಕನ್ನಡ ವಿಶೇಷತಃ ಮಂಗಳೂರಿನ ಕೀರ್ತಿಗೆ ಅದು ಮಸಿ ಬಳಿದಿದೆಯೆಂದೂ ತಿಳಿಸಿದ್ದಾರೆ.</p>.<p><strong>ಕರ್ಫ್ಯೂ ವಿಸ್ತರಣೆ<br /> ಮಂಗಳೂರು, ಏ. 21–</strong> ಕೋಮುವಾರು ಗಲಭೆಯು ಹೊಸ ಪ್ರದೇಶಗಳಿಗೆ ಹರಡಿದ್ದರ ಕಾರಣ ನಗರದಲ್ಲಿ ಜಾರಿಮಾಡಲಾಗಿರುವ ಕರ್ಫ್ಯೂವನ್ನು ಸಂಜೆಯಿಂದ ಬೆಳಗಿನವರೆಗೆ ಇಂದಿನಿಂದ ಏಲು ದಿನಗಳ ಕಾಲ ವಿಸ್ತರಿಸಲಾಗಿದೆ.</p>.<p><strong>ಮೈಸೂರಿನಲ್ಲಿ ಕಾಲರಾದಿಂದ ಮತ್ತೆ 5 ಸಾವು<br /> ಮೈಸೂರು, ಏ. 21–</strong> ನಗರದಲ್ಲಿ ಇಂದು ಹೊಸದಾಗಿ ಕಾಲರಾ ರೋಗಕ್ಕೆ ಐದು ಮಂದಿ ಬಲಿಯಾದರೆಂದೂ ಹಾಗೂ ಇತರ 57 ಮಂದಿಗೆ ಬೇನೆ ತಗುಲಿರುವುದಾಗಿಯೂ ವರದಿಯಾಗಿದೆ.</p>.<p><strong>ಭಾರತ – ಪಾಕ್ ಬಾಂಧವ್ಯ ಸುಧಾರಣೆ ಸಾಧ್ಯ: ಕೊಸಿಗಿನ್ ಆಶಯ<br /> ನವದೆಹಲಿ, ಏ. 21– ಭಾರತ–</strong> ಪಾಕಿಸ್ತಾನ್ ಬಾಂಧವ್ಯವನ್ನು ಸಹಜ ಸ್ಥಿತಿಗೆ ತರಲು ಹೊಸ ಮಾರ್ಗವಾವುದನ್ನೂ ತಾವು ಯೋಚಿಸಿಲ್ಲವೆಂದು ರಷ್ಯದ ಪ್ರಧಾನಿ ಕೊಸಿಗಿನ್ ಇಂದು ಇಲ್ಲಿ ಹೇಳಿದರು.</p>.<p>ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರೊಂದಿಗೆ ತೊಂಬತ್ತು ನಿಮಿಷ ಕಾಲ ಮಾತುಕತೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.</p>.<p><strong>ತ್ರಿಭಾಷಾ ಸೂತ್ರವೇ ಏಕೈಕ ಪರಿಹಾರ: ಮುರಾರಜಿ ಸ್ಪಷ್ಟನೆ<br /> ನವದೆಹಲಿ, ಏ. 21–</strong> ಭಾಷಾ ಪ್ರಶ್ನೆಗೆ ಏಕೈಕ ಪರಿಹಾರವೆಂದರೆ ತ್ರಿಭಾಷಾ ಸೂತ್ರ ಎಂದು ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಖಚಿತ ಪಡಿಸಿದ್ದಾರೆ.</p>.<p>ದೆಹಲಿಯ ತಮಿಳು ಮಾಸಪತ್ರಿಕೆಯ ಸಂದರ್ಶನದಲ್ಲಿ ಈ ಮಾತನ್ನು ಹೇಳಿರುವ ಅವರು ‘ಹತ್ತು ವರ್ಷಗಳಲ್ಲಿ ಪರಿಹಾರವೊಂದು ಕಾಣುವುದು ಖಂಡಿತ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರಿನಲ್ಲಿ ಕರ್ಫ್ಯೂ ವೇಳೆಯಲ್ಲಿ ಲೂಟಿ<br /> ಮಂಗಳೂರು, ಏ. 21–</strong> ಕೋಮುವಾರು ಗಲಭೆಯಿಂದ ಪ್ರಕ್ಷುಬ್ಧ ಸ್ಥಿತಿ ಒದಗಿರುವ ಮಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಮುಂಜಾನೆಯವರೆಗೆ ಕರ್ಫ್ಯೂ ಜಾರಿಯಲ್ಲಿದ್ದರೂ, ಲೂಟಿ ಮತ್ತು ಬೆಂಕಿ ಹಚ್ಚುವ ಕೃತ್ಯಗಳು ರಾತ್ರಿಯೆಲ್ಲಾ ನಿಲ್ಲದೆ ನಡೆದವು.</p>.<p>ವ್ಯಾಪಾರ ವಹಿವಾಟಿನ ಪ್ರಮುಖ ಕೇಂದ್ರವಾದ ಬಂದರ್ ಪ್ರದೇಶದಲ್ಲಿ ಅನೇಕ ದಾಸ್ತಾನು ಮಳಿಗೆಗಳಿಗೆ ಗೂಂಡಾಗಳು ಬೆಂಕಿ ಹಚ್ಚಿದ್ದರು. ಆಗ್ನಿಶಾಮಕ ದಳದವರ 12 ಗಂಟೆಗಳ ಹೋರಾಟದ ನಂತರವೂ ಇಂದು ಬೆಳಿಗ್ಗೆ ಬಂದರ್ ಪ್ರದೇಶದ ಮೇಲೆ ಹೊಗೆಯ ಮೋಡಗಳು ಕವಿದಿದ್ದವು.</p>.<p><strong>ಡಾ. ಆಳ್ವ ಕಳವಳ<br /> ಬೆಂಗಳೂರು, ಏ. 21– </strong>ಕಳೆದ ಎರಡು ದಿನಗಳಿಂದ ಮಂಗಳೂರಿನಲ್ಲಿ ಆಗಿರುವ ಶಾಂತಿ ಭಂಗವು ತಮಗೆ ನೋವನ್ನುಂಟುಮಾಡಿದೆಯೆಂದು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ. ಕೆ. ನಾಗಪ್ಪ ಆಳ್ವ ಅವರು ಆತಂಕ ವ್ಯಕ್ತಪಡಿಸಿ, ದಕ್ಷಿಣ ಕನ್ನಡ ವಿಶೇಷತಃ ಮಂಗಳೂರಿನ ಕೀರ್ತಿಗೆ ಅದು ಮಸಿ ಬಳಿದಿದೆಯೆಂದೂ ತಿಳಿಸಿದ್ದಾರೆ.</p>.<p><strong>ಕರ್ಫ್ಯೂ ವಿಸ್ತರಣೆ<br /> ಮಂಗಳೂರು, ಏ. 21–</strong> ಕೋಮುವಾರು ಗಲಭೆಯು ಹೊಸ ಪ್ರದೇಶಗಳಿಗೆ ಹರಡಿದ್ದರ ಕಾರಣ ನಗರದಲ್ಲಿ ಜಾರಿಮಾಡಲಾಗಿರುವ ಕರ್ಫ್ಯೂವನ್ನು ಸಂಜೆಯಿಂದ ಬೆಳಗಿನವರೆಗೆ ಇಂದಿನಿಂದ ಏಲು ದಿನಗಳ ಕಾಲ ವಿಸ್ತರಿಸಲಾಗಿದೆ.</p>.<p><strong>ಮೈಸೂರಿನಲ್ಲಿ ಕಾಲರಾದಿಂದ ಮತ್ತೆ 5 ಸಾವು<br /> ಮೈಸೂರು, ಏ. 21–</strong> ನಗರದಲ್ಲಿ ಇಂದು ಹೊಸದಾಗಿ ಕಾಲರಾ ರೋಗಕ್ಕೆ ಐದು ಮಂದಿ ಬಲಿಯಾದರೆಂದೂ ಹಾಗೂ ಇತರ 57 ಮಂದಿಗೆ ಬೇನೆ ತಗುಲಿರುವುದಾಗಿಯೂ ವರದಿಯಾಗಿದೆ.</p>.<p><strong>ಭಾರತ – ಪಾಕ್ ಬಾಂಧವ್ಯ ಸುಧಾರಣೆ ಸಾಧ್ಯ: ಕೊಸಿಗಿನ್ ಆಶಯ<br /> ನವದೆಹಲಿ, ಏ. 21– ಭಾರತ–</strong> ಪಾಕಿಸ್ತಾನ್ ಬಾಂಧವ್ಯವನ್ನು ಸಹಜ ಸ್ಥಿತಿಗೆ ತರಲು ಹೊಸ ಮಾರ್ಗವಾವುದನ್ನೂ ತಾವು ಯೋಚಿಸಿಲ್ಲವೆಂದು ರಷ್ಯದ ಪ್ರಧಾನಿ ಕೊಸಿಗಿನ್ ಇಂದು ಇಲ್ಲಿ ಹೇಳಿದರು.</p>.<p>ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರೊಂದಿಗೆ ತೊಂಬತ್ತು ನಿಮಿಷ ಕಾಲ ಮಾತುಕತೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.</p>.<p><strong>ತ್ರಿಭಾಷಾ ಸೂತ್ರವೇ ಏಕೈಕ ಪರಿಹಾರ: ಮುರಾರಜಿ ಸ್ಪಷ್ಟನೆ<br /> ನವದೆಹಲಿ, ಏ. 21–</strong> ಭಾಷಾ ಪ್ರಶ್ನೆಗೆ ಏಕೈಕ ಪರಿಹಾರವೆಂದರೆ ತ್ರಿಭಾಷಾ ಸೂತ್ರ ಎಂದು ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಖಚಿತ ಪಡಿಸಿದ್ದಾರೆ.</p>.<p>ದೆಹಲಿಯ ತಮಿಳು ಮಾಸಪತ್ರಿಕೆಯ ಸಂದರ್ಶನದಲ್ಲಿ ಈ ಮಾತನ್ನು ಹೇಳಿರುವ ಅವರು ‘ಹತ್ತು ವರ್ಷಗಳಲ್ಲಿ ಪರಿಹಾರವೊಂದು ಕಾಣುವುದು ಖಂಡಿತ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>