ಹೈದರಾಬಾದ್, ಫೆ.10 (ಪಿಟಿಐ)– ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ನಡುವಿನ ಆಲಮಟ್ಟಿ ಅಣೆಕಟ್ಟು ವಿವಾದ ಇತ್ಯರ್ಥ ಕುರಿತಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಮಧ್ಯಸ್ಥಿಕೆ ವಹಿಸಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇಂದು ಈ ವಿಷಯ ಪ್ರಕಟಿಸಿದರು.
ಆಲಮಟ್ಟಿ ಕುರಿತ ತಜ್ಞರ ಸಮಿತಿ, ವಿವಾದದ ಇತ್ಯರ್ಥಕ್ಕಾಗಿ ರಚಿಸಲಾಗಿರುವ ಸಂಯುಕ್ತರಂಗ ಮುಖ್ಯಮಂತ್ರಿಗಳ ಸಮಿತಿಯ ಮುಖ್ಯಸ್ಥ ಜ್ಯೋತಿ ಬಸು ಅವರಿಗೆ ಈಗಾಗಲೇ ವರದಿ ಸಲ್ಲಿಸಿದೆ.