<p>‘ಧರ್ಮದ ದ್ವೀಪಕ್ಕೆ ಮಾನವೀಯತೆಯ ಸೇತುವೆ’ ಸುದ್ದಿ (ಪ್ರ.ವಾ., ಜ.9) ನೈಜ ಭಾರತದ ಚಿತ್ರಣದಂತಿದೆ.</p>.<p>ಹೌದು, ಯಾವುದೇ ಕಪಟತನಗಳಿಲ್ಲದ ಜನಸಾಮಾನ್ಯರು ಇರುವುದೇ ಹೀಗೆ; ಬದುಕುವುದೇ ಹೀಗೆ ಎಂಬುದನ್ನು ಇದು ಎತ್ತಿತೋರಿಸಿದೆ. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಸ್ನೇಹ, ಸೌಹಾರ್ದಗಳು ನಮ್ಮ ಜನಸಾಮಾನ್ಯರಲ್ಲಿ ರಕ್ತಗತವಾಗಿರುತ್ತವೆ ಎಂಬುದನ್ನು ಹಾಗೂ ಈ ಹೊತ್ತಿನಲ್ಲಿ ಇದು ಅನಿವಾರ್ಯವೆಂಬುದನ್ನು ಈ ಸಂಗತಿ ರುಜುವಾತುಪಡಿಸಿದ್ದು, ಎಲ್ಲರ ಕಣ್ತೆರೆಸುವಂತಿದೆ.</p>.<p>ನಮ್ಮ ತುಮಕೂರಿನ ಚಾಮುಂಡೇಶ್ವರಿ ದೇವಾಲಯವೂ ಇದಕ್ಕೊಂದು ಜ್ವಲಂತ ನಿದರ್ಶನದಂತಿದೆ. ವಿಶೇಷವಾಗಿ ಪ್ರತಿ ಶುಕ್ರವಾರ ಅನ್ಯಧರ್ಮೀಯರೂ ಇಲ್ಲಿಗೆ ತಮ್ಮ ಪುಟಾಣಿ ಮಕ್ಕಳೊಂದಿಗೆ ಬಂದು ಪೂಜಿಸುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಅದೇ ರೀತಿ ಚಿಕ್ಕಪೇಟೆಯ ಬಾಬಯ್ಯನ ವಾರ್ಷಿಕ ಉರುಸ್ಗೂ ಹಿಂದೂಗಳು ಹೋಗಿ ಪೂಜಿಸುವುದು ಸಹಜವಾಗಿದೆ.</p>.<p>ಎಲ್ಲಿಯವರೆಗೆ ಪಟ್ಟಭದ್ರ ದುಷ್ಟಶಕ್ತಿಗಳು, ಕಿಡಿಗೇಡಿಗಳು ಮಧ್ಯಪ್ರವೇಶಿಸುವುದಿಲ್ಲವೋ, ಅಲ್ಲಿಯವರೆಗೆ ಜನಸಾಮಾನ್ಯರು ಸೌಹಾರ್ದದಿಂದ, ನೆಮ್ಮದಿಯಿಂದ ಇರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಧರ್ಮದ ದ್ವೀಪಕ್ಕೆ ಮಾನವೀಯತೆಯ ಸೇತುವೆ’ ಸುದ್ದಿ (ಪ್ರ.ವಾ., ಜ.9) ನೈಜ ಭಾರತದ ಚಿತ್ರಣದಂತಿದೆ.</p>.<p>ಹೌದು, ಯಾವುದೇ ಕಪಟತನಗಳಿಲ್ಲದ ಜನಸಾಮಾನ್ಯರು ಇರುವುದೇ ಹೀಗೆ; ಬದುಕುವುದೇ ಹೀಗೆ ಎಂಬುದನ್ನು ಇದು ಎತ್ತಿತೋರಿಸಿದೆ. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಸ್ನೇಹ, ಸೌಹಾರ್ದಗಳು ನಮ್ಮ ಜನಸಾಮಾನ್ಯರಲ್ಲಿ ರಕ್ತಗತವಾಗಿರುತ್ತವೆ ಎಂಬುದನ್ನು ಹಾಗೂ ಈ ಹೊತ್ತಿನಲ್ಲಿ ಇದು ಅನಿವಾರ್ಯವೆಂಬುದನ್ನು ಈ ಸಂಗತಿ ರುಜುವಾತುಪಡಿಸಿದ್ದು, ಎಲ್ಲರ ಕಣ್ತೆರೆಸುವಂತಿದೆ.</p>.<p>ನಮ್ಮ ತುಮಕೂರಿನ ಚಾಮುಂಡೇಶ್ವರಿ ದೇವಾಲಯವೂ ಇದಕ್ಕೊಂದು ಜ್ವಲಂತ ನಿದರ್ಶನದಂತಿದೆ. ವಿಶೇಷವಾಗಿ ಪ್ರತಿ ಶುಕ್ರವಾರ ಅನ್ಯಧರ್ಮೀಯರೂ ಇಲ್ಲಿಗೆ ತಮ್ಮ ಪುಟಾಣಿ ಮಕ್ಕಳೊಂದಿಗೆ ಬಂದು ಪೂಜಿಸುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಅದೇ ರೀತಿ ಚಿಕ್ಕಪೇಟೆಯ ಬಾಬಯ್ಯನ ವಾರ್ಷಿಕ ಉರುಸ್ಗೂ ಹಿಂದೂಗಳು ಹೋಗಿ ಪೂಜಿಸುವುದು ಸಹಜವಾಗಿದೆ.</p>.<p>ಎಲ್ಲಿಯವರೆಗೆ ಪಟ್ಟಭದ್ರ ದುಷ್ಟಶಕ್ತಿಗಳು, ಕಿಡಿಗೇಡಿಗಳು ಮಧ್ಯಪ್ರವೇಶಿಸುವುದಿಲ್ಲವೋ, ಅಲ್ಲಿಯವರೆಗೆ ಜನಸಾಮಾನ್ಯರು ಸೌಹಾರ್ದದಿಂದ, ನೆಮ್ಮದಿಯಿಂದ ಇರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>