‘ಅಶ್ವತ್ಥ್ ಅವರು ಹಾಕಿರುವ ರಾಗವೇ ಇರಲಿ’ ಎಂದು ಕೆಲವು ಗಾಯಕರು ಒತ್ತಾಯಿಸುತ್ತಿದ್ದಾರೆ. ಈ ರಾಗ ಯುದ್ಧಕ್ಕೆ ಹೊರಟಿರುವ ಸೈನಿಕರ ಮೆರವಣಿಗೆಯ ಶೈಲಿಯಲ್ಲಿದ್ದು, ನಾಡಗೀತೆಗೆ ಒಗ್ಗುತ್ತಿಲ್ಲ. ಹಾಡಲು ತುಂಬಾ ಸಮಯವನ್ನೂ ತೆಗೆದುಕೊಳ್ಳುತ್ತದೆ. ಅನಂತ ಸ್ವಾಮಿಯವರ ರಾಗ ಸಂಯೋಜನೆ ಗೀತೆಗೆ ಒಪ್ಪುವಂತಿದ್ದು, ಅದಕ್ಕೇ ಮಾನ್ಯತೆ ನೀಡಬೇಕು.