<p>ಇತ್ತೀಚೆಗೆ ಸುಪ್ರೀಂ ಕೋರ್ಟ್ನ ನಾಲ್ಕು ಮಂದಿ ನ್ಯಾಯಮೂರ್ತಿಗಳ ಸಾಂಕೇತಿಕ ಪ್ರತಿಭಟನೆ ಭಾರತದ ಜನಸಾಮಾನ್ಯರ ಮುಂದೆ ನಾನಾ ಪ್ರಶ್ನೆಗಳನ್ನು ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಎ.ನಾರಾಯಣ ಅವರು ತಮ್ಮ ‘ಅನುರಣನ’ ಅಂಕಣದಲ್ಲಿ (ಪ್ರ.ವಾ., ಜ.16) ಅರ್ಥಪೂರ್ಣವಾಗಿ ಬೆಳಕು ಚೆಲ್ಲಿದ್ದಾರೆ.</p>.<p>ನಿಜ, ನಾಲ್ಕೂ ನ್ಯಾಯಾಧೀಶರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಈ ಬೃಹತ್ ರಾಷ್ಟ್ರದ ಮಹೋನ್ನತ ನ್ಯಾಯಾಲಯದ ಬಗ್ಗೆ ಕೆಲವು ಗುಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳನ್ನು ಸ್ಪಷ್ಟಪಡಿಸಬೇಕಾಗಿತ್ತು. ಈ ನೆಲೆಯಲ್ಲಿ ಎ.ನಾರಾಯಣ ಅವರ ವ್ಯಾಖ್ಯಾನ ಕೆಲವು ಮೂಲಭೂತ ಸೂಕ್ಷ್ಮಗಳನ್ನು ಪರಿಚಯಿಸಿದೆ.</p>.<p>ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಈ ರೀತಿಯ ಸಾಂಕೇತಿಕ ಪ್ರತಿಭಟನೆಯಿಂದ ತಲ್ಲಣಗೊಳ್ಳಬೇಕಾಗಿಲ್ಲ. ಪಾರದರ್ಶಕತೆ ಕುರಿತು ಎಂಥ ಪ್ರಶ್ನೆಗಳು ಬಂದರೂ ನಾವು ಸ್ವಾಗತಿಸಲೇಬೇಕು. ಅದು ಇಂಥಕಡೆ ಬರಬೇಕು, ಇಂಥ ಕಡೆ ಬರಬಾರದು ಎಂದು ಯೋಚಿಸುವ ಅಗತ್ಯವಿಲ್ಲ. ಇಂತಹದ್ದು ಹೆಚ್ಚು ಹೆಚ್ಚು ಆಂತರಿಕ ಸಂವಾದವಾಗಿಯೂ ಬೆಳೆಯಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚೆಗೆ ಸುಪ್ರೀಂ ಕೋರ್ಟ್ನ ನಾಲ್ಕು ಮಂದಿ ನ್ಯಾಯಮೂರ್ತಿಗಳ ಸಾಂಕೇತಿಕ ಪ್ರತಿಭಟನೆ ಭಾರತದ ಜನಸಾಮಾನ್ಯರ ಮುಂದೆ ನಾನಾ ಪ್ರಶ್ನೆಗಳನ್ನು ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಎ.ನಾರಾಯಣ ಅವರು ತಮ್ಮ ‘ಅನುರಣನ’ ಅಂಕಣದಲ್ಲಿ (ಪ್ರ.ವಾ., ಜ.16) ಅರ್ಥಪೂರ್ಣವಾಗಿ ಬೆಳಕು ಚೆಲ್ಲಿದ್ದಾರೆ.</p>.<p>ನಿಜ, ನಾಲ್ಕೂ ನ್ಯಾಯಾಧೀಶರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಈ ಬೃಹತ್ ರಾಷ್ಟ್ರದ ಮಹೋನ್ನತ ನ್ಯಾಯಾಲಯದ ಬಗ್ಗೆ ಕೆಲವು ಗುಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳನ್ನು ಸ್ಪಷ್ಟಪಡಿಸಬೇಕಾಗಿತ್ತು. ಈ ನೆಲೆಯಲ್ಲಿ ಎ.ನಾರಾಯಣ ಅವರ ವ್ಯಾಖ್ಯಾನ ಕೆಲವು ಮೂಲಭೂತ ಸೂಕ್ಷ್ಮಗಳನ್ನು ಪರಿಚಯಿಸಿದೆ.</p>.<p>ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಈ ರೀತಿಯ ಸಾಂಕೇತಿಕ ಪ್ರತಿಭಟನೆಯಿಂದ ತಲ್ಲಣಗೊಳ್ಳಬೇಕಾಗಿಲ್ಲ. ಪಾರದರ್ಶಕತೆ ಕುರಿತು ಎಂಥ ಪ್ರಶ್ನೆಗಳು ಬಂದರೂ ನಾವು ಸ್ವಾಗತಿಸಲೇಬೇಕು. ಅದು ಇಂಥಕಡೆ ಬರಬೇಕು, ಇಂಥ ಕಡೆ ಬರಬಾರದು ಎಂದು ಯೋಚಿಸುವ ಅಗತ್ಯವಿಲ್ಲ. ಇಂತಹದ್ದು ಹೆಚ್ಚು ಹೆಚ್ಚು ಆಂತರಿಕ ಸಂವಾದವಾಗಿಯೂ ಬೆಳೆಯಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>